Mysore
27
overcast clouds

Social Media

ಬುಧವಾರ, 26 ಆಗಸ್ಟ್ 2026
Light
Dark

ಮದ್ದೂರು ಬೈಪಾಸ್‌ ರಸ್ತೆ ಕೆಲಸ ಬಹುತೇಕ ಕಂಪ್ಲಿಟ್‌ : ಸಂಸದ ಪ್ರತಾಪ್‌ ಸಿಂಹ

ನವೆಂಬರ್‌ ಅಂತ್ಯಕ್ಕೆ ಮದ್ದೂರು ಬೈಪಾಸ್‌ ಸಂಚಾರಕ್ಕೆ ಮುಕ್ತ

ಮಂಡ್ಯ : ಬೆಂಗಳೂರು – ಮೈಸೂರು  ದಶಪಥ ಹೆದ್ದಾರಿ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ ನವೆಂಬರ್‌ ಅಂತ್ಯದ ಒಳಗೆ ಮದ್ದೂರು ಬೈಪಾಸ್‌ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್‌ ಸಿಂಹ ಮಾಹಿತಿ ನೀಡಿದ್ದಾರೆ.

ಮದ್ದೂರು ಬೈಪಾಸ್‌ ಕೆಲಸ ಬಹುತೇಕ ಕಂಪ್ಲಿಟ್‌ ಆಗಿದ್ದು ಎಕ್ಸ್‌ ಪೆನ್ಸನ್‌ ಜಾಯಿಂಟ್ಸ್‌  ಕೆಲಸ ಮಾತ್ರ ಬಾಕಿ ಇದೆ. 10-15 ದಿನದಲ್ಲಿ ಆ ಕೆಲಸ ಮುಗಿಯಲಿದೆ. ಹೊಸ  ವರ್ಷದಿಂದ ಸರಾಗವಾಗಿ ಬೆಂಗಳೂರು ಮೈಸೂರಿಗೆ ಸಂಚಾರ ಮಾಡಬಹುದು ಎಂದಿದ್ದಾರೆ. ಈ ಕಾಮಗಾರಿ ಮುಕ್ತಾಯಗೊಂಡರೆ 75 ರಿಂದ 80 ನಿಮಿಷಗಳಲ್ಲಿ ಮೈಸೂರು ಬೆಂಗಳೂರು ತಲುಪಬಹುದು ಎಂದು ಪ್ರತಾಪ್‌ ಸಿಂಹ ಮದ್ದೂರು ಬೈಪಾಸ್‌ ಮೇಲೆ ನಿಂತು  ಫೆಸ್‌ ಬುಕ್‌ ಲೈವ್‌ ನಲ್ಲಿ ಮಾಹಿತಿ ನೀಡಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!