Mysore
24
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ವಾರಾಂತ್ಯ ವಿಶೇಷ : ಪೂಚಂತೇ ‘ಅಣ್ಣನ ನೆನಪು’ ಅನಾವರಣ

ಪೂರ್ಣ ಚಂದ್ರ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯು ಭಾನುವಾರ ಸಂಜೆ ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಾಟಕದ ರೂಪದಲ್ಲಿ ಅನಾವರಣಗೊಳ್ಳಲಿದೆ.

ಕೃತಿಯನ್ನು ಕರ್ಣಂ ಪವನ್ ಪ್ರಸಾದ್ ರಂಗರೂಪಕ್ಕೆ ಇಳಿಸಿದ್ದಾರೆ. ಹನು ರಾಮಸಂಜೀವ ಅವರು ನಾಟಕ ನಿರ್ದೇಶನ ಮಾಡಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ಎರಡು ಪ್ರದರ್ಶನಗಳಿವೆ. ಪೂರ್ಣ ಚಂದ್ರ ತೇಜಸ್ವಿಯವರು ಬರೆದಿರುವ ‘ಅಣ್ಣನ ನೆನಪು’ ಕೃತಿ ಆಧಾರಿತ ಈ ನಾಟಕವು ಪೂಚಂತೇ ಅವರ ದೃಷ್ಟಿಯಲ್ಲಿ ಕುವೆಂಪು ಅವರ ಜೀವನದ ಘಟನೆಗಳು, ವ್ಯಕ್ತಿತ್ವ ಹಾಗೂ ಅವರ ಸಾಹಿತ್ಯಕ್ಕೆ ಸಂಬಂಧಿಸಿದ ತೇಜಸ್ವಿಯವರ ನೆನಪಿನ ಗುಚ್ಚ ಇದಾಗಿದ್ದು, ರಂಗದ ಮೇಲೆ ನಾಟಕ ರೂಪದಲ್ಲಿ ಮೂಡಿಬರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!