Mysore
21
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಕಾಂತಾರ 2 ’ ಸಿನೆಮಾ ಮಾಡಲು ಪಂಜುರ್ಲಿ ದೈವ ಅನುಗ್ರಹ

ಮೈಸೂರು: ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಕಾಂತಾರ 2 ಬರುವದು ಬಹುತೇಕ ಖಚಿತವಾಗಿದೆ.ದೈವಗಳ ಕುರಿತು ಸಿನೆಮಾ ಮಾಡಲು ಕೆಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದರಿಂದ ’ಕಾಂತಾರ ೨’ ಬಗ್ಗೆ ಸಹಜವಾಗಿಯೇ ಕುತೂಹಲ ಕೂಡ ಮೂಡಿತ್ತು.ಹಾಗಾಗಿಯೇ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ಮೊರೆ ಹೋಗಿದ್ದರು.ದೈವ ಹಲವು ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.

ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಸಿನೆಮಾದ
ನಿರ್ದೇಶಕ ರಿಷಬ್ ಶೆಟ್ಟಿ,ನಿರ್ಮಾಪಕ ವಿಜಯ್ ಕಿರಗಂದೂರ್,ನಾಯಕಿ ಗೌತಮಿ ಗೌಡ ಸೇರಿದಂತೆ ಬಹುತೇಕ ಸದಸ್ಯರು ಹಾಜರಿದ್ದರು. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ನೇತ್ರತ್ವದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲಾದಲ್ಲಿ ಕಾಂತಾರ ಸಿನೆಮಾ 2 ಮಾಡುವ ಕುರಿತು ರಿಷಬ್ ಒಪ್ಪಿಗೆ ಕೇಳಿದ್ದರು.

ಕಾಂತಾರ ಸಿನೆಮಾವು ರೂ.೧೫ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಇದೀಗ ರೂ.೪೦೦ ಕೋಟಿಗೂ ಅಧಿಕ ಹಣ ಬಾಚಿಕೊಂಡು ಇನ್ನೂ ತುಂಬಿದ ಪ್ರದರ್ಶನದಲ್ಲಿ ಮುಂದುವರಿದಿದೆ. ಇದೇ ಸಂದರ್ಭ ರಿಷಬ್ ಶೆಟ್ಟಿ ಮತ್ತು ತಂಡ ಭಾಗ 2 ಸಿನೆಮಾಗೆ ದೈವದ ಮೊರೆ ಹೋಗಿದ್ದು ಮುಂದಿನ ಸಿನೆಮಾವನ್ನು ನೂರು ಸಲ ಯೋಚಿಸಿ,ಶ್ರಮ ವಹಿಸಿ ಮಾಡುವಂತೆ ದೈವವು ಎಚ್ಚರಿಕೆ ನೀಡಿದೆ ಎನ್ನಲಾಗಿದೆ.ಎಲ್ಲಿಯೂ ನೇಮ ನಿಷ್ಠೆಗೆ ಅಪಚಾರ ಆಗದಂತೆ ನಿರ್ಮಾಣ ಮಾಡುವಂತೆ ಅಣ್ಣಪ್ಪ ಪಂಜುರ್ಲಿ ದೈವ ಎಚ್ಚರಿಕೆ ನೀಡಿದೆ.

ಈ ನಿಟ್ಟಿನಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರು ಸೇರಿ ಕದ್ರಿ ಮಂಜುನಾಥೇಶ್ವರ ದೇಗುಲ ಸೇರಿದಂತೆ ಹಲವು ದೇವಾಲಯಗಳ ಅಭಿವೃದ್ಧಿಗೆ ಸಿನೆಮಾ ಪ್ರದರ್ಶನದಿಂದ ಬಂದ ಲಾಭಾಂಶದಲ್ಲಿ ಸ್ವಲ್ಪ ಮೊತ್ತವನ್ನು ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮಧ್ಯರಾತ್ರಿ ನಡೆದ ದೈವದ ಜೊತೆಗಿನ ಮಾತೂಕತೆಯಲ್ಲಿ ದೈವ ಹಲವು ಸೂಚನೆಗಳ ಜತೆ ಸಿನೆಮಾ ಮಾಡಲು ಅನುಮತಿ ನೀಡಿದೆ ಎಂದು ಹೇಳಲಾಗಿದೆ.

ಹಾಗಾಗಿ ಸಿನೆಮಾದ ಕಥೆ ಮಾಡಲು ರಿಷಬ್ ಶೆಟ್ಟಿ ಅಂಡ್ ಟೀಮ್ ಹುರುಪಿನಿಂದಲೇ ತಯಾರಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಕೋಲದಲ್ಲಿ ಭಾಗವಹಿಸಿದ್ದ ಹಲವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಪಂಜುರ್ಲಿ ದೈವವೂ ಕೂಡಾ ’ಕಾಂತಾರ ೨’ ಮಾಡಲು ಅನುಮತಿ ನೀಡಿದೆ.ಜೊತೆಗೆ ಕೆಲವು ಸಲಹೆ ಮತ್ತು ಎಚ್ಚರಿಕೆಯನ್ನೂ ಕೂಡಾ ನೀಡಿದೆ. ಭಾಗ-2 ರಲ್ಲಿ ಈ ಹಿಂದಿನ ಕಲಾವಿದರೇ ಮುಂದುವರಿಯಲಿದ್ದಾರೆ.ಕಾಂತಾರ ಸಿನೆಮಾ ತಂಡದ ಜತೆಯಲ್ಲಿ ರಿಷಬ್ ಕುಟುಂಬ ಕೂಡಾ ಕೋಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!