ಬೇಕಿತ್ತು ಸ್ವನಿಯಂತ್ರಣ!
ಹರಿದು ಬಂದಿತು ಜನಸಾಗರ
ಆರ್ಸಿಬಿಯ ವಿಜಯೋತ್ಸವಕೆ
ನೂಕುನುಗ್ಗಲಿಗೆ ಕಾರಣವಾಯಿತು
ಅತಿಯಾದ ಹಿಗ್ಗು ಸಂಭ್ರಮ!
ಸಂಭವಿಸಿತು ಅನಿರೀಕ್ಷಿತ ಆಘಾತ!
ಸಂಭ್ರಮ ಅಳಿದು ದುಃಖ ಮಡುಗಟ್ಟಿತು
ನಿಯಂತ್ರಿಸಿಕೊಳ್ಳಬೇಕಿತ್ತು ಯುವಪಡೆ
ಅತಿಯಾದ ಹಿಗ್ಗು ಸಂಭ್ರಮವ
ಮಾಡಿಕೊಳ್ಳಬೇಕಿತ್ತು ಆಯೋಜಕರು ಪೂರ್ವಸಿದ್ಧತೆಯ
ಆಗ ತಪ್ಪಿಸಬಹುದಿತ್ತು ದುರಂತವ!
-ಸಿ.ಪಿ.ಸಿದ್ಧಾಶ್ರಮ, ಮೈಸೂರು





