ಮೈಸೂರಿನ ರಾಜರಾಜೇಶ್ವರಿ ನಗರದ ಬಳಿಯ ನ್ಯಾಯಾಂಗ ಬಡಾವಣೆಯಲ್ಲಿ ಐದಕ್ಕೂ ಹೆಚ್ಚು ಸರ್ಕಾರಿ ವಸತಿನಿಲಯಗಳಿದ್ದು, ಬೆಳಿಗ್ಗೆ ಹಾಗೂ ಸಂಜೆ ಸಾಕಷ್ಟು ನಗರ ಸಾರಿಗೆ ಬಸ್ಗಳು ಸಂಚರಿಸದೇ ಇರುವುದರಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಹಾಗೂ ಸಂಜೆಯ ವೇಳೆ ವಸತಿನಿಲಯಕ್ಕೆ ಮರಳಲು ತೀವ್ರ ತೊಂದರೆಯಾಗಿದೆ.
ಬೆಳಿಗ್ಗೆ ೭.೩೦ಕ್ಕೆ ಒಂದು ಬಸ್ ಬಂದರೆ ನಂತರದ ಬಸ್ ೮.೩೦ಕ್ಕೆ ಬರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳು ಹಾಗೂ ಕೆಲಸಕ್ಕೆ ತೆರಳುವ ಸಾರ್ವಜನಿಕರಿಗೆ ಬಸ್ಗಳಿಲ್ಲದೇ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಪ್ರತಿನಿತ್ಯ ಬೆಳಿಗ್ಗೆ ೭.೩೦ರಿಂದ ೧೦ ಗಂಟೆಯವರೆಗೆ ಮತ್ತು ಸಂಜೆ ೪ರಿಂದ ೬ ಗಂಟೆವರೆಗೆ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಜಿ.ಪೂಜಾ, ದ್ವಿತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ, ಮಹಾರಾಣಿ ಕಲಾ ಕಾಲೇಜು, ಮೈಸೂರು



