‘ಒಂದು ನಗರ, ಒಂದು ವೇದಿಕೆ’ ಯೋಜನೆ, ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಹೊಸ ಸಾಧನವಾಗಿದೆ. ಈ ಯೋಜನೆ, ಎಲ್ಲಾ ತ್ಯಾಜ್ಯ ನಿರ್ವಹಣಾ ಚಟುವಟಿಕೆಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಯೋಜಿಸಬಹುದಾಗಿದೆ. ಇದರ ಮೂಲಕ, ತ್ಯಾಜ್ಯ ಸಂಗ್ರಹಣೆ, ಮಾರ್ಗ ನಿರ್ವಹಣೆ ಮತ್ತು ಇತರ ಚಟುವಟಿಕೆಗಳನ್ನು ಸುಗಮವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಬಹುದು.
ಈ ವ್ಯವಸ್ಥೆಯಿಂದ ನಾಗರಿಕರು, ಸೇವಾ ಪೂರೈಕೆದಾರರು ಮತ್ತು ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ಕಾರ್ಯಗಳು ಸರಳ ಮತ್ತು ವೇಗವಾಗುತ್ತವೆ. ಮಾರ್ಗಗಳನ್ನು ಮತ್ತು ಸಮಯವನ್ನು ಸರಿಯಾಗಿ ಯೋಜಿಸಿ, ಕೆಲಸಗಳನ್ನು ಕಡಿಮೆ ಸಮಯದಲ್ಲಿ ಮಾಡಬಹುದಲ್ಲದೆ, ಇದರ ಜೊತೆಗೆ ವೆಚ್ಚವು ಕಡಿಮೆ ಆಗುತ್ತದೆ. ಇನ್ನೂ ಪರಿಸರ ಸಂರಕ್ಷಣೆಯೂ ಸುಧಾರಿತವಾಗುತ್ತದೆ. ತ್ಯಾಜ್ಯ ಸಂಸ್ಕರಣೆಯಲ್ಲಿ ಹೆಚ್ಚು ಪರಿಸರ ಸ್ನೇಹಿ ವಿಧಾನಗಳನ್ನು ಅನುಸರಿಸಲು ಅವಕಾಶ ಸಿಗುತ್ತದೆ. ಡಿಜಿಟಲ್ ವೇದಿಕೆಯಲ್ಲಿ ಸಂಗ್ರಹಿಸಿದ ದತ್ತಾಂಶದಿಂದ, ಪ್ರತಿಯೊಬ್ಬ ನಾಗರಿಕ ತ್ಯಾಜ್ಯ ಸಂಗ್ರಹಣೆ ಕುರಿತು ನಿರ್ಧಾರಗಳನ್ನು ನಿಖರವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು. ಜೊತೆಗೆ, ಪ್ರಜೆಗಳ ಜಾಗೃತಿ ಹೆಚ್ಚುತ್ತವೆ, ಮತ್ತು ಅವರು ತಮ್ಮ ಹತ್ತಿರದ ಕಚೇರಿಗಳಲ್ಲಿ ಸಂಬಂಧಿಸಿದ ಮಾಹಿತಿಯನ್ನು ಸರಳವಾಗಿ ಪಡೆಯಬಹುದು. ಬೆಂಗಳೂರು ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಆದರೆ ಮಹಾ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಇನ್ನೂ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿಲ್ಲ. ಎಲ್ಲಾ ಪ್ರಮುಖ ನಗರಗಳಲ್ಲಿ ಈ ಯೋಜನೆ ಜಾರಿಗೆ ಬಂದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
– ಡಾ.ಎಚ್.ಕೆ.ವಿಜಯಕುಮಾರ, ಬೆಂಗಳೂರು





