ಮೈಸೂರಿನ ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಕಳೆದ ೫೦ ವರ್ಷಗಳಿಂದ ವಿದ್ಯಾರ್ಥಿಗಳನ್ನು, ಬೋಧಕ -ಬೋಧಕೇತರ ಸಿಬ್ಬಂದಿಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದು ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದ್ದು, ಊಟ, ಉಪಾಹಾರ, ಕಾಫಿ ಸವಿಯುವ ಸಂದರ್ಭದಲ್ಲಿ ತರಗತಿಗಳಲ್ಲಿ ನಡೆದ ಘಟನೆಗಳು, ಅಧ್ಯಯನಕ್ಕೆ ಸಂಬಂಧಿಸಿದ ಚರ್ಚೆಗಳು, ಅಧ್ಯಾಪಕರ ನಡುವೆ ಚರ್ಚೆಗೂ ರೌಂಡ್ ಕ್ಯಾಂಟೀನ್ ವೇದಿಕೆಯಂತಿದೆ. ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವಾಗ ರೌಂಡ್ ಕ್ಯಾಂಟೀನ್ನನ್ನು ಮರೆಯಲಾಗುವುದಿಲ್ಲ.
ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದ್ದ ಉಪಾಹಾರಗೃಹ ಕಳೆದ ಒಂದು ವರ್ಷದಿಂದ ಮುಚ್ಚಿದ್ದು, ಅದರ ಒಳ ಮತ್ತು ಹೊರ ಆವರಣ ಕಸದ ರಾಶಿಗಳಿಂದ ತುಂಬಿ ತುಳುಕುತ್ತಿದೆ. ಕ್ಯಾಂಟೀನ್ ಪುನರಾರಂಭಿ ಸುವುದರೊಂದಿಗೆ ಆವರಣದಲ್ಲಿರುವ ಕಸವನ್ನು ತೆರವುಗೊಳಿಸಲು ಮೈಸೂರು ವಿವಿ ಅಧಿಕಾರಿಗಳು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
– ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು



