Mysore
20
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಓದುಗರ ಪತ್ರ: ಕೆಪಿಎಸ್‌ಸಿ ಹಗರಣ; ಯುವಜನರ ಭವಿಷ್ಯಕ್ಕೆ ಕೊಳ್ಳಿ

dgp murder case

ಕೆಪಿಎಸ್‌ಸಿ ಭ್ರಷ್ಟಾಚಾರದ ಕುರಿತು ಇತ್ತೀಚಿನ ಸುದ್ದಿ ಕಣ್ಣು ತೆರೆಸುವಂತಿದೆ. ದಕ್ಷ ಅಧಿಕಾರಿಗಳನ್ನು ಆರಿಸಬೇಕಾದ ಸಾಂವಿಧಾನಿಕ ಸಂಸ್ಥೆಯ ಅಧ್ಯಕ್ಷರೇ ಅಮಾನತ್ತುಗೊಂಡಿರುವುದು ಇಡೀ ವ್ಯವಸ್ಥೆಗೆ ಅಂಟಿದ ಕಪ್ಪು ಚುಕ್ಕೆ. ವರ್ಷಗಟ್ಟಲೆ ಹಗಲಿರುಳೂ ಶ್ರಮಿಸುವ ಲಕ್ಷಾಂತರ ಗ್ರಾಮೀಣ ಹಾಗೂ ಬಡ ಪ್ರತಿಭಾವಂತ ಅಭ್ಯರ್ಥಿಗಳ ಭವಿಷ್ಯವನ್ನು ಇಂತಹ ಅಕ್ರಮಗಳು ಬಲಿ ತೆಗೆದುಕೊಳ್ಳುತ್ತಿವೆ. ಹಗರಣಗಳು ನಡೆದಾಗಲೆಲ್ಲ ಕೇವಲ ತೇಪೆ ಹಚ್ಚುವ ತನಿಖಾ ಸಮಿತಿಗಳನ್ನು ರಚಿಸಿ ಕೈತೊಳೆದುಕೊಳ್ಳುವ ಪರಿಪಾಠ ನಿಲ್ಲಬೇಕು. ಹಣ ಮತ್ತು ರಾಜಕೀಯ ಬಲ ಇರುವವರಿಗಷ್ಟೇ ಹುದ್ದೆಗಳು ಸಿಗುತ್ತವೆ ಎಂಬ ಭಾವನೆ ಮೂಡಿದರೆ, ಇಡೀ ಪ್ರಜಾಪ್ರಭುತ್ವದ ಮೇಲೆಯೇ ಜನರಿಗೆ ಜುಗುಪ್ಸೆ ಉಂಟಾಗುತ್ತದೆ. ಸರ್ಕಾರವು ರಾಜಕೀಯ ಹಿತಾಸಕ್ತಿ ಬದಿಗಿಟ್ಟು, ಯುಪಿಎಸ್‌ಸಿ ಮಾದರಿಯಲ್ಲಿ ಪಾರದರ್ಶಕ ಡಿಜಿಟಲ್ ಸುರಕ್ಷತೆ ಹಾಗೂ ಕಠಿಣ ಸುಧಾರಣೆಗಳನ್ನು ತರ ಬೇಕು. ಭ್ರಷ್ಟಾಚಾರದ ಮೂಲಕ ಬರುವ ಅಧಿಕಾರಿಗಳಿಂದ ಪ್ರಾಮಾಣಿಕ ಜನಸೇವೆ ಎಂದಿಗೂ ಅಸಾಧ್ಯ.

-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!