Mysore
21
clear sky

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಓದುಗರ ಪತ್ರ: ಸಿಪಿಸಿ ಕಾಯ್ದೆ ತಿದ್ದುಪಡಿ ಸ್ವಾಗತಾರ್ಹ

ಓದುಗರ ಪತ್ರ

ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಸಿಪಿಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಅದು ಮೇ ೨೬ರಿಂದಲೇ ಜಾರಿಗೆ ಬಂದಿರುವುದು ಸ್ವಾಗತಾರ್ಹ. ದೇಶದಲ್ಲೇ ಕರ್ನಾಟಕದಲ್ಲೇ ಮೊದಲು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಪ್ರಕರಣಗಳ ವಿಲೇವಾರಿಗೆ ೨ ವರ್ಷ ಕಾಲಮಿತಿ ನಿಗದಿ ಪಡಿಸಿ ನಿಯಮಗಳನ್ನು ರೂಪಿಸಿರುವುದು ಪ್ರಕರಣಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗಬಹುದು. ದೇಶದ ಎಲ್ಲಾ ರಾಜ್ಯಗಳು ಇದನ್ನು ಅನುಸರಿಸಬೇಕು. ಹಾಗೂ ಕ್ರಿಮಿನಲ್ ಪ್ರಕರಣಗಳಿಗೂ ತಿದ್ದುಪಡಿಯ ಅವಶ್ಯಕತೆ ಇದೆ. ಕಾನೂನು ಸಚಿವಾಲಯ ಈ ಬಗ್ಗೆ ಗಮನಹರಿಸಬೇಕು. ಪ್ರಕರಣಗಳ ವಿಲೇವಾರಿ ತಡವಾಗುವುದನ್ನು ಇಂತಹ ತಿದ್ದುಪಡಿ ಕೊನೆಗಾಣಿಸುತ್ತದೆ.

– ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!