ಮೈಸೂರಿನ ವೀಣೆ ಶೇಷಣ್ಣ ರಸ್ತೆಯ ತಾತಯ್ಯನವರ ವಿದ್ಯಾರ್ಥಿ ನಿಲಯದ ಸಮೀಪ ಕಸದ ರಾಶಿಯನ್ನು ತೆರವುಗೊಳಿಸದೇ ಇರುವುದರಿಂದ ಸೊಳ್ಳೆ, ನೊಣಗಳ ಹಾವಳಿ ತೀವ್ರವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.
ನಗರ ಪಾಲಿಕೆಯವರು ಕೂಡಲೇ ಕಸವನ್ನು ತೆರವುಗೊಳಿಸುವ ಮೂಲಕ ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಳ್ಳಬೇಕಾಗಿದೆ ಹಾಗೂ ಸಾರ್ವಜನಿಕರು ಎಲ್ಲೆಂದರಲ್ಲಿ ಕಸವನ್ನು ಹಾಕದಂತೆ ಅರಿವು ಮೂಡಿಸಬೇಕು, ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಬೇಕು.
-ಚೈತ್ರಾ, ಮೈಸೂರು





