ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಸಂಭ್ರಮವು ಎಲ್ಲೆಡೆ ಕಳೆಕಟ್ಟಿದೆ ಆದರೆ, ಇಂದು ಚಾಮುಂಡಿಬೆಡ್ಡದಲ್ಲಿ ನಡೆದ ವೇದಿಕೆಯ ಕಾರ್ಯಕ್ರಮವದಲ್ಲಿ ಮೈಸೂರಿನ ಪ್ರಥಮ ಪ್ರಜೆ ವೇದಿಕೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಗೆ ಸ್ಥಾನವನ್ನು ನೀಡಿಲ್ಲ.
ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಹದಿಮೂರು ಮಂದಿ ಗಣ್ಯರಿಗೆ ಅವಕಾಶ ನೀಡಲಾಗುವುದೆಂದು ಹೇಳಿದ್ದರೂ ಕೊನೆಯ ಕ್ಷಣದಲ್ಲಿ ರಾಷ್ಟ್ರಪತಿ ಕಾರ್ಯಾಲಯದ ಶಿಷ್ಟಾಚಾರದಂತೆ ನಡೆದುಕೊಂಡಿದ್ದರಿಂದ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ,ಮಹಾಪೌರ ಶಿವಕುಮಾರ್ ಅವರಿಗೆ ಅವಕಾಶ ಸಿಗಲಿಲ್ಲ. ಇದರಿಂದಾಗಿ ಈ ಇಬ್ಬರೂ ಗಣ್ಯರು ಶಾಸಕರಿಗೆ ನಿರ್ಮಿಸಿದ್ದ ಗ್ಯಾಲರಿಯಲ್ಲಿ ಬಂದು ಕುಳಿತುಕೊಳ್ಳುವಂತಾಯಿತು.
ದಸರಾ ಮಹೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಮೈಸೂರಿನ ಪ್ರಥಮ ಪ್ರಜೆಗಿಲ್ಲ ಸ್ಥಾನ!





