Mysore
26
broken clouds

Social Media

ಭಾನುವಾರ, 06 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ವಿಚ್ಛೇದನಗಳೂ ದುಬಾರಿಯಾಗಿವೇ!

ಓದುಗರ ಪತ್ರ

ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ ಮೂಲಕ ಜನರಿಗೆ ತಿಳಿದಿದೆ. ಇವರ ವಿವಾಹ ವಿಚ್ಛೇದನ ಪ್ರಕರಣ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ದೇಶದಲ್ಲಿ ಅನೇಕ ನಟಿ-ನಟಿಯರು ವೈಯಕ್ತಿಕ ಕಾರಣಗಳಿಂದಾಗಿ ಅಥವಾ ಸಾಂಸಾರಿಕ ಬಿಕ್ಕಟ್ಟುಗಳಿಂದ ಪಾರಾಗಲು ವಿವಾಹ ವಿಚ್ಛೇದನೆಗೆ ಮುಂದಾಗುತ್ತಿರುವುದು, ಅದರಲ್ಲೂ ಭಾರತದಂತಹ ನೆಲದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಕಾರಣ ಈ ನೆಲ ಗಟ್ಟಿಯಾದ ಪತಿ-ಪತ್ನಿ ಕುಟುಂಬದ ಬೇರನ್ನು ಹೊಂದಿರುವುದು ಪಾಶ್ಚಾತ್ಯರಲ್ಲೂ ಅಚ್ಚರಿ ಮೂಡಿಸುವಂತಿತ್ತು. ಈಗ ಇದು ಇತಿಹಾಸವಾಗುತ್ತಿದೆಯೇನೋ ಎನ್ನಿಸುತ್ತಿದೆ.

ತಮ್ಮ ಹೆಂಡತಿ ಹಾಗೂ ಮೂರು ಮಕ್ಕಳಿಗೆ ಪರಿಹಾರದ ರೂಪದಲ್ಲಿ ದುನಿಯಾ ವಿಜಯ್ ನ್ಯಾಯಾಲಯದ ಆದೇಶದ ಪ್ರಕಾರ ಎರಡು ಕೋಟಿ ರೂ.ಗಳನ್ನು ನೀಡಲು ಒಪ್ಪಿzರೆ. ಬಾಲಿವುಡ್‌ನಲ್ಲೂ ಈ ರೀತಿಯ ವಿಚ್ಛೆದನಗಳು ಸಾಮಾನ್ಯವಾಗಿ ಹೋಗಿವೆ. ಅಲ್ಲೂ ಪರಿಹಾರದ ಮೊತ್ತ ಕೋಟಿ ಕೋಟಿ ರೂಪಾಯಿಗಳದಾಗಿರುತ್ತದೆ. ಇವುಗಳನ್ನೆ ನೋಡಿದರೆ, ವಿವಾಹ ದಂತೆ, ವಿಚ್ಛೇದನವೂ ದುಬಾರಿಯಾಗುತ್ತಿದೆಯೇನೋ?! ಆದರೆ ಇದು ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.

-ಕೆ.ವಿ.ವಾಸು, ಮೈಸೂರು

Tags:
error: Content is protected !!