ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಯ ವಿವಾಹ ವಿಚ್ಛೇದನಕ್ಕೆ ರಾಜ್ಯ ಹೈಕೋರ್ಟ್ ಸಮ್ಮತಿ ನೀಡಿರುವುದು ಮಾಧ್ಯಮಗಳ ಮೂಲಕ ಜನರಿಗೆ ತಿಳಿದಿದೆ. ಇವರ ವಿವಾಹ ವಿಚ್ಛೇದನ ಪ್ರಕರಣ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ದೇಶದಲ್ಲಿ ಅನೇಕ ನಟಿ-ನಟಿಯರು ವೈಯಕ್ತಿಕ ಕಾರಣಗಳಿಂದಾಗಿ ಅಥವಾ ಸಾಂಸಾರಿಕ ಬಿಕ್ಕಟ್ಟುಗಳಿಂದ ಪಾರಾಗಲು ವಿವಾಹ ವಿಚ್ಛೇದನೆಗೆ ಮುಂದಾಗುತ್ತಿರುವುದು, ಅದರಲ್ಲೂ ಭಾರತದಂತಹ ನೆಲದಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಆತಂಕ ಮೂಡಿಸುತ್ತದೆ. ಕಾರಣ ಈ ನೆಲ ಗಟ್ಟಿಯಾದ ಪತಿ-ಪತ್ನಿ ಕುಟುಂಬದ ಬೇರನ್ನು ಹೊಂದಿರುವುದು ಪಾಶ್ಚಾತ್ಯರಲ್ಲೂ ಅಚ್ಚರಿ ಮೂಡಿಸುವಂತಿತ್ತು. ಈಗ ಇದು ಇತಿಹಾಸವಾಗುತ್ತಿದೆಯೇನೋ ಎನ್ನಿಸುತ್ತಿದೆ.
ತಮ್ಮ ಹೆಂಡತಿ ಹಾಗೂ ಮೂರು ಮಕ್ಕಳಿಗೆ ಪರಿಹಾರದ ರೂಪದಲ್ಲಿ ದುನಿಯಾ ವಿಜಯ್ ನ್ಯಾಯಾಲಯದ ಆದೇಶದ ಪ್ರಕಾರ ಎರಡು ಕೋಟಿ ರೂ.ಗಳನ್ನು ನೀಡಲು ಒಪ್ಪಿzರೆ. ಬಾಲಿವುಡ್ನಲ್ಲೂ ಈ ರೀತಿಯ ವಿಚ್ಛೆದನಗಳು ಸಾಮಾನ್ಯವಾಗಿ ಹೋಗಿವೆ. ಅಲ್ಲೂ ಪರಿಹಾರದ ಮೊತ್ತ ಕೋಟಿ ಕೋಟಿ ರೂಪಾಯಿಗಳದಾಗಿರುತ್ತದೆ. ಇವುಗಳನ್ನೆ ನೋಡಿದರೆ, ವಿವಾಹ ದಂತೆ, ವಿಚ್ಛೇದನವೂ ದುಬಾರಿಯಾಗುತ್ತಿದೆಯೇನೋ?! ಆದರೆ ಇದು ಒಳ್ಳೆಯದಕ್ಕೋ ಅಥವಾ ಕೆಟ್ಟದ್ದಕ್ಕೋ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.
-ಕೆ.ವಿ.ವಾಸು, ಮೈಸೂರು



