೧೯೮೬ರ ಆಗಸ್ಟ್ ೨೯ರಂದು (ಜಗದ್ಗುರು ವೀರಸಿಂಹಾಸನ ಮಹಾಸಂಸ್ಥಾನ ಮಠದ ೨೩ ನೇ ಮಠಾಧಿಪತಿ) ಶಿವರಾತ್ರಿ ರಾಜೇಂದ್ರ ಶ್ರೀಗಳ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ‘ಅರ್ಚನ’ ಎಂಬ ಬೃಹತ್ ಗ್ರಂಥವನ್ನು ರಾಷ್ಟ್ರಕವಿ ಕುವೆಂಪು ಅವರು ಬಿಡುಗಡೆಗೊಳಿಸಿ ಮಾತನಾಡಿ, ಸುತ್ತೂರು ಶ್ರೀ ರಾಜೇಂದ್ರ ಮಹಾಸ್ವಾಮೀಜಿಯವರ ೭೦ನೇ ವರ್ಷದ ವರ್ಧಂತಿ ಸಮಾರಂಭಕ್ಕೆ ನಾನು ಬಂದಿರುವುದು ನಿಮ್ಮಲ್ಲಿ ಅನೇಕರಿಗೆ ಆಶ್ಚರ್ಯ ಆಗುವಂತೆ ನನಗೂ ಸ್ವಂತಃ ಉಂಟುಮಾಡಿದೆ. ಭರತ ಖಂಡದಲ್ಲಿ ಶಾಲಾ ಕಾಲೇಜು ತೆರೆದು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಜತಿ,ಮತ, ಭೇದವಿಲ್ಲದೆ ಊಟ ವಸತಿ ಒದಗಿಸಿ ಲಕ್ಷಾಂತರ ಜನರನ್ನು ವಿದ್ಯಾವಂತರನ್ನಾಗಿ ಮಾಡಿದ ಅನೇಕ ಸಾಧು, ಸಂತರು, ಮಠಗಳು ಇವೆ. ಇದನ್ನು ತಪಸ್ಸಿನಂತೆ ಕೈಗೊಂಡಿರುವ ರಾಜೇಂದ್ರ ಸ್ವಾಮಿಗಳು ಅಗ್ರಪಂಕ್ತಿಯಲ್ಲಿzರೆ. ಅವರು ಅಭಿನಂದನೀಯರು ಎಂದು ಹೇಳಿ,ಅವರ ಕಾಯಕ ಸೇವಾ ಕಾರ್ಯಗಳಲ್ಲಿ ತೊಡಗಿರುವವರಿಗೆಲ್ಲ ಎಂದೆಂದಿಗೂ ಆದರ್ಶ ಪ್ರಾಯವಾಗಿರಲಿದೆ ಎಂದು ಹೇಳಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವುದು ಹೆಚ್ಚು ಅರ್ಥಪೂರ್ಣ ವೆನಿಸುತ್ತದೆ. ಇದೇ ಸಂದರ್ಭದಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಕೃತಿಗಳನ್ನು ಮುದ್ರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ನೀಡಲಾಗಿತ್ತು.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು



