ಅಧಿಕಾರಿಗಳ ತಪಾಸಣೆ ವೇಳೆ ಬೆಂಗಳೂರಿನ ಕೆಲವು ಪಂಚತಾರಾ ಹೋಟೆಲ್ಗಳಲ್ಲಿ, ಕೊಳೆತ ಮಾಂಸ, ಹಳೆಯ ತರಕಾರಿಗಳು ಇರುವುದು ಪತ್ತೆಯಾಗಿರುವುದೇ ಎಲ್ಲೆಲ್ಲೂ ಚರ್ಚಿತ ವಿಷಯವಾಗಿದೆ.
ಇಷ್ಟು ದಿನ ಇದು ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲವೇ?, ಬೆಂಗಳೂರು ಒಂದೇ ಅಲ್ಲ ರಾಜ್ಯದ ದೊಡ್ಡ – ದೊಡ್ಡ ನಗರದ ಐಷಾರಾಮಿ ಹೋಟೆಲ್ಗಳಲ್ಲೂ ಇದೇ ಪರಿಸ್ಥಿತಿ ಇರುವುದಿಲ್ಲ ಎಂದು ನಂಬುವುದು ಹೇಗೆ? ಹಾಗಾಗಿ ರಾಜ್ಯದ ಎಲ್ಲ ಹೋಟೆಲ್ಗಳಲ್ಲೂ ಸಮಗ್ರ ತಪಾಸಣೆ ನಡೆಸಬೇಕು, ದುರಂತದ ಸಂಗತಿ ಎಂದರೆ, ಕೆಲವು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಇದ್ದ ಆರೋಗ್ಯ ಇಲಾಖೆಯನ್ನು ರದ್ದು ಪಡಿಸಿ ಹೋಟೆಲ್ಗಳ ಆಹಾರ ಶುದ್ಧತೆ ಮತ್ತು ಸ್ವಚ್ಛತೆಯನ್ನು ಕಡೆಗಣಿಸಿದೆ. ಈಗ ಪರಿಸರ ಇಲಾಖೆ ಹೆಚ್ಚುವರಿಯಾಗಿ ಈ ಕೆಲಸ ನಿರ್ವಹಿಸುತ್ತಿದೆ.
ಅಮೆರಿಕದ ಖಾಸಗಿ ಸಂಸ್ಥೆಯೊಂದು ಹಳಸಿದ ಆಹಾರಗಳನ್ನು ತಿನ್ನುವುದರಿಂದ ಶೇ. ೨೦ ರಷ್ಟು ಜನರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಇಂತಹ ಆಹಾರ ತಿಂದರೆ ಕಾಯಿಲೆ ಬಾರದೇ ಇನ್ನೇನು ಬರಲು ಸಾಧ್ಯ ?ಇಂತಹ ಕಾರ್ಯಾಚರಣೆ ಅಪರೂಪಕ್ಕಾಗದೆ ನಿಯಮಿತವಾಗಿ ನಡೆಯಲಿ.
-ಬೂಕನಕೆರೆ ವಿಜೇಂದ್ರ, ಮೈಸೂರು



