ಕಳೆದ ೨೫ ವರ್ಷಗಳಿಂದ ರಾಜ್ಯದಲ್ಲಿ ೧೦ ಸಾವಿರ ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡದಿರುವುದು ಸರ್ಕಾರದ ಅಕ್ಷಮ್ಯ ನಿರ್ಲಕ್ಷ್ಯ. ೧,೨೦೦ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಕೇವಲ ೯೦ ಗ್ರಂಥಪಾಲಕರಿದ್ದರೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ? eನಾಧಾರಿತ ಸಮಾಜ ನಿರ್ಮಿಸುತ್ತೇವೆ ಎಂದು ಹೇಳಿಕೊಳ್ಳುವ ಆಡಳಿತಗಾರರು ಲೈಬ್ರರಿ ಸೈನ್ಸ್ ಪದವೀಧರರ ವಯೋಮಿತಿ ಮೀರುತ್ತಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಶೋಚನೀಯ.
ಉನ್ನತ ಶಿಕ್ಷಣ ಹಾಗೂ ವಿಶ್ವವಿದ್ಯಾಲಯಗಳ ಗ್ರಂಥಾಲಯಗಳು ಇಂದು ಜ್ಞಾನಕೇಂದ್ರಗಳಾಗದೆ ಬರಿ ದೂಳು ತಿನ್ನುವ ಕೊಠಡಿಗಳಾಗಿವೆ. ಶೈಕ್ಷಣಿಕ ವ್ಯವಸ್ಥೆಯ ಬೆನ್ನೆಲುಬಾದ ಗ್ರಂಥಾಲಯಗಳನ್ನು ದಷ್ಟಪುಷ್ಟಗೊಳಿಸದೆ, ಗುತ್ತಿಗೆ ಆಧಾರದ ಶೋಷಣೆ ಮುಂದುವರಿಸುವುದು ಖಂಡನೀಯ.
ಯುಜಿಸಿ ಮತ್ತು ಎಐಸಿಟಿಇ ಮಾನದಂಡಗಳಂತೆ ಸರ್ಕಾರ ತಕ್ಷಣವೇ ಶಾಶ್ವತ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಅಕ್ಷರ ದೇಗುಲಗಳನ್ನು ಅನಾಥಗೊಳಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಟವಾಡುವುದನ್ನು ಸರ್ಕಾರ ತಕ್ಷಣವೇ ನಿಲ್ಲಿಸಬೇಕು.
ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು



