ಬಿಡದಿ ಟೌನ್ಶಿಪ್ ನಿರ್ಮಾಣವನ್ನು ಮಾಡೇ ತೀರುತ್ತೇವೆ ಎನ್ನುವಂತಹ ಹಠಕ್ಕೆ ಬಿದ್ದಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಆದರೆ ಈಗಾಗಲೇ ವಿರೋಧ ಪಕ್ಷಗಳಲ್ಲದೆ ಸಮಾಜದ ಹಲವಾರು ಹಿರಿಯ ಗಣ್ಯರು ಹಾಗೂ ಯಾವುದೇ ರಾಜಕೀಯ ಪಕ್ಷದ ಹಂಗು ಇಲ್ಲದ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸೇರಿದಂತೆ ಹಲವರು ಟೌನ್ಶಿಪ್ಗಾಗಿ ರೈತರ ಜಮೀನನ್ನು ಬಲವಂತವಾಗಿ ಕಿತ್ತು ಕೊಳ್ಳಬಾರದು ಎಂದು ರೈತರ ಜೊತೆ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇಷ್ಟಾದರೂ ಸರ್ಕಾರ ಯಾವುದಕ್ಕೂ ಮಣಿದಂತೆ ಕಾಣುತ್ತಿಲ್ಲ.
ಸರ್ಕಾರದ ನಡೆ ಪ್ರಜಪ್ರಭುತ್ವಕ್ಕೆ ವಿರೋಧಿಯಾದದ್ದು. ಶೇಕಡಾ ೮೦ ರಷ್ಟು ರೈತರು ತಮ್ಮ ಕೃಷಿ ಜಮೀನು ನೀಡುವುದಿಲ್ಲ ಎಂದು ಕಳೆದ ೬೦ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರ್ಕಾರ ನಡೆದುಕೊಳ್ಳುತ್ತಿರುವ ಉದ್ಧಟತನ ಪರಮಾವಧಿ ,ರೈತರ ಬದುಕಿನ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ. ರೈತರ ವಿರೋಧ ಕಟ್ಟಿಕೊಂಡು ಯಾವ ಸರ್ಕಾರವೂ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆ ದೇಶದ ಇಲ್ಲ. ರಾಜ್ಯ ಸರ್ಕಾರ ರೈತರನ್ನು ಗೌರವಿಸುವುದೇ ಆದರೆ ಬಿಡದಿ ಟೌನ್ಶಿಪ್ ಯೋಜನೆಯನ್ನು ಕೈಬಿಡುವುದು ಒಳ್ಳೆಯದು.
-ಬೂಕನಕೆರೆ ವಿಜೇಂದ್ರ, ಮೈಸೂರು




