Mysore
21
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಓದುಗರ ಪತ್ರ: ನಾಳಿನ ನೆರಳಿಗೆ ಇಂದೇ ಗಿಡ ನೆಡೋಣ

ಓದುಗರ ಪತ್ರ

ಈ ಬಾರಿಯ ಬೇಸಿಗೆಯ ಧಗೆ ಮಧ್ಯಾಹ್ನದ ವೇಳೆ ಯಾರೂ ಹೊರಗಡೆ ಓಡಾಡದಂತೆ ಮಾಡಿದೆ. ವಾಹನ ಸವಾರರ ಸ್ಥಿತಿಯಂತೂ ಹೇಳತೀರದು. ರಸ್ತೆ ಬದಿಯ ಅಂಗಡಿಗಳಿಗೆ ಹೋದಾಗ ವಾಹನ ನಿಲ್ಲಿಸಲು ಒಂದು ಮರದ ನೆರಳಿಗಾಗಿ ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಅಪ್ಪಿತಪ್ಪಿ ಬಿಸಿಲಿನಲ್ಲಿ ಬೈಕ್ ಅಥವಾ ಸ್ಕೂಟರ್‌ಗಳನ್ನು ನಿಲ್ಲಿಸಿದರೆ ಸೀಟುಗಳು ಕಾದ ಹೆಂಚಿನಂತಾಗಿ, ಅದರ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ.

ಬಿಸಿಲಿನ ತಾಪಕ್ಕೆ ನಮ್ಮ ಚರ್ಮದ ಬಣ್ಣವೂ ಕಪ್ಪಾಗುತ್ತಿದೆ. ನಾವು ಇಂದು ನೆರಳಿನಲ್ಲಿ ನಿಂತು ಉಸಿರಾಡುತ್ತಿದ್ದೇವೆ ಎಂದರೆ, ಅದಕ್ಕೆ ಅಂದು ಯಾರೋ ಹಿರಿಯರು ನೆಟ್ಟು ಬೆಳೆಸಿದ ಮರಗಳೇ ಕಾರಣ. ಆದರೆ ಇಂದು ನಾವು ಯಾರೋ ಗಿಡ ನೆಡುತ್ತಾರೆ, ಸರ್ಕಾರ ನೋಡಿಕೊಳ್ಳುತ್ತದೆ ಎಂದು ಗಿಡ ನೆಟ್ಟು ಪರಿಸರ ಉಳಿಸುವ ಕರ್ತವ್ಯ ಮರೆತರೆ ಮುಂದಿನ ಪೀಳಿಗೆಗೆ ಕೇವಲ ಕಾಂಕ್ರೀಟ್ ಕಾಡು ಮಾತ್ರ ಉಳಿಯುತ್ತದೆ.

ಈ ಪರಿಸ್ಥಿತಿ ಬದಲಾಗಬೇಕಾದರೆ ಪ್ರತಿಯೊಬ್ಬರೂ ಸೂಕ್ತವಾದ ಜಾಗದಲ್ಲಿ ಕನಿಷ್ಠ ಒಂದೊಂದು ಗಿಡವನ್ನುನೆಟ್ಟು ಜವಾಬ್ದಾರಿಯಿಂದ ಪೋಷಿಸಬೇಕು. ಇದರಿಂದ ಮುಂದಿನ ದಿನಗಳಲ್ಲಿ ನಮಗೂ ನೆರಳು ಸಿಗುತ್ತದೆ, ನಮ್ಮ ಮಕ್ಕಳ ಭವಿಷ್ಯಕ್ಕೂ ದಾರಿಯಾಗುತ್ತದೆ. ಪ್ರಕೃತಿಯನ್ನು ರಕ್ಷಿಸುವ ಈ ಕಾರ್ಯ ನಮ್ಮಿಂದಲೇ ಶುರುವಾಗಲಿ.

-ಬಿ.ಗಣೇಶ, ಕೆ.ಜಿ.ಕೊಪ್ಪಲು, ಮೈಸೂರು

Tags:
error: Content is protected !!