Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಸಿಲಿಂಡರ್‌ಗೆ ಮುಗಿಬಿದ್ದ ಜನ : ಪೊಲೀಸ್‌ ರಕ್ಷಣೆಯಲ್ಲಿ ಸಿಲಿಂಡರ್‌ ವಿತರಣೆ

ಕೆ.ಆರ್.ಪೇಟೆ : ಗೃಹ ಬಳಕೆ ಸಿಲಿಂಡರ್ ಸಿಗುವುದಿಲ್ಲ ಎಂದು ಏಕಾಏಕಿ ನೂರಾರು ಗ್ರಾಹಕರು ಗ್ಯಾಸ್ ಏಜೆನ್ಸಿ ಬಳಿ ಜಮಾಯಿಸಿದ ಪರಿಣಾಮ ನೂಕಾಟ ತಳ್ಳಾಟ ಉಂಟಾಗಿದೆ. ಕೊನೆಗೆ ಏಜೆನ್ಸಿ ಮಾಲೀಕರು ಪೊಲೀಸ್ ಠಾಣೆಯ ಮುಂದೆ ಲಾರಿ ನಿಲ್ಲಿಸಿ ಪೊಲೀಸರ ರಕ್ಷಣೆಯಲ್ಲಿ ಸಿಲಿಂಡರ್ ವಿತರಣೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಪಟ್ಟಣದಲ್ಲಿ ಜರುಗಿದೆ.

ಕೆ.ಆರ್ ಪೇಟೆ ಪಟ್ಟಣದ ಮಂಜುನಾಥ್ ಏಜೆನ್ಸಿ ಎಂದಿನಂತೆ ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲು ಗೊಡೋನ್ ಬಾಗಿಲು ತೆರದಿತ್ತು. ಇಂದು ಭಾನುವಾರದ ಕಾರಣ ಏಕಾಏಕಿ ನೂರಾರು ಜನರು ಸಿಲಿಂಡರ್ ತೆಗೆದುಕೊಳ್ಳಲು ಬಂದಿದ್ದಾರೆ. ಈ ವೇಳೆ ಸಿಲಿಂಡರ್ ಎಲ್ಲಿ ಖಾಲಿಯಾಗುತ್ತದೆ ಎಂದು ಬಂದ ನೂರಾರು ಜನರು ಗೊಡೋನ್‌ಗೆ ಮುಗಿಬಿದ್ದರು. ಈ ವೇಳೆ ಏಜೆನ್ಸಿಯವರು ಸಿಲಿಂಡರ್ ವಿತರಣೆ ಮಾಡಲು ಕಷ್ಟವಾಗಿದ್ದು, ಜನರಲ್ಲಿ ನೂಕು ನುಗ್ಗಲು ಉಂಟಾಗಿದೆ.

ಬಳಿಕ ಏಜೆನ್ಸಿ ಮಾಲೀಕರು ಕೆ.ಆರ್ ಪೇಟೆ ಪಟ್ಟಣ ಪೊಲೀಸ್ ಠಾಣೆ ಮುಂಭಾಗ ಸಿಲಿಂಡರ್ ಲಾರಿಯನ್ನ ನಿಲ್ಲಿಸಿಕೊಂಡು ಪೊಲೀಸರ ಸಮ್ಮುಖದಲ್ಲಿ ಗ್ರಾಹಕರಿಗೆ ಸಿಲಿಂಡರ್ ವಿತರಿಸಲಾಯಿತು.

Tags:
error: Content is protected !!