ರಾಜ್ಯ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯಡಿಯಲ್ಲಿ ವಿಮೆ ಸೌಲಭ್ಯ ಪಡೆದಿರುವವರ ಕುಟುಂಬ ವರ್ಷಕ್ಕೆ ೫ ಲಕ್ಷರೂ. ವೆಚ್ಚದ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ. ಆದರೆ ಈ ಯೋಜನೆಯನ್ನು ಡಯಾಲಿಸಿಸ್ ಚಿಕಿತ್ಸಾ ಸೌಲಭ್ಯದಿಂದ ಹೊರಗಿಟ್ಟಿರುವುದು ಬೇಸರದ ಸಂಗತಿಯಾಗಿದೆ.
ಪ್ರತಿ ಬಾರಿ ಡಯಾಲಿಸಿಸ್ಗೆ ೧,೩೦೦ ರೂ. ಪಾವತಿಸಬೇಕು. ವಾರಕ್ಕೆ ೩ ಬಾರಿ ೧೩೦೦ ರೂ. ಕೊಟ್ಟು ಡಯಾಲಿಸಿಸ್ ಮಾಡಿಸುವುದು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಕಷ್ಟವಾಗುತ್ತದೆ. ಹಣದ ಕೊರತೆಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದಿದ್ದರೆ ರೋಗಿ ಸಾವನ್ನಪ್ಪುವ ಸಾಧ್ಯತೆಯಿರುತ್ತದೆ. ಆದ್ದರಿಂದ ಸರ್ಕಾರ ಈ ಬಗ್ಗೆ ತುರ್ತು ಗಮನ ಹರಿಸಿ ಯಶಸ್ವಿನಿ ಯೋಜನೆಯಲ್ಲಿ ಡಯಾಲಿಸಿಸ್ ವೆಚ್ಚ ಭರಿಸುವಂತಾಗಲಿ. ಹಾಗೂ ಇದೇ ರೀತಿ ಹೃದಯ ಸಂಬಂಧಿ ಅಂಜಿಯೋಗ್ರಾಮ್ ವೆಚ್ಚವನ್ನು ಕೂಡ ಯಶಸ್ವಿನಿ /ಬಿ ಪಿ ಎಲ್ ವರ್ಗದವರಿಗೆ ಭರಿಸುವಂತೆ ಸರ್ಕಾರ ಆದೇಶ ಮಾಡಲಿ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





