ಮೈಸೂರು: ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಬಹಿರಂಗಪಡಿಸಲು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಪವರ್ ಶೇರಿಂಗ್ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡಲಿ. ಚರ್ಚೆ ಆಗಿದೆ ಎಂದ ಮೇಲೆ ಎಲ್ಲಿ ಆಗಿದೆ ಅಂತಲೂ ಗೊತ್ತಾಗಬೇಕು. ಚರ್ಚೆ ಆಗಿದ್ದರೆ ಯಾರ ಮುಂದೆ ಚರ್ಚೆಯಾಗಿದೆ ಎಂದು ಗೊತ್ತಾಗಲೇಬೇಕು. ಇದು ಎಷ್ಟು ವಿಳಂಬ ಆಗುತ್ತೋ ಅಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ. ಕೆಲವರು ಗುಂಪು ಸೇರುತ್ತಾರೆ. ಸಚಿವ ಸ್ಥಾನವನ್ನು ಕೇಳುತ್ತಾರೆ ಎಂದು ಹೇಳಿದರು.





