Mysore
25
broken clouds

Social Media

ಭಾನುವಾರ, 05 ಏಪ್ರಿಲ 2026
Light
Dark

ಓದುಗರ ಪತ್ರ: ಕಾನ್ಫಿಡೆಂಟ್ ಮಾಲೀಕನಿಗೆ ಬದುಕುವ ಕಾನ್ಫಿಡೆಂಟ್ ಇಲ್ಲದಾಯಿತೇ?

dgp murder case

ಕೋಟಿ ಕೋಟಿ ಹಣವಿದ್ದರೂ ನೆಮ್ಮದಿಯ ಸಂಬಂಧಗಳು ಇಲ್ಲದಿದ್ದರೆ ಜೀವನ ನಿರರ್ಥಕ. ಐಷಾರಾಮಿ ಬದುಕು ಎಂಬುದು ಸೌಕರ್ಯಗಳನ್ನು ನೀಡಬಲ್ಲದೇ ಹೊರತು, ಶಾಶ್ವತ ಸಂತೋಷ ಹಾಗೂ ನೆಮ್ಮದಿಯನ್ನು ಹಣದಿಂದ ಕೊಳ್ಳಲು ಸಾಧ್ಯವಿಲ್ಲ. ಹಣ ಅತಿಯಾದಾಗ ಅದರ ಸರಿಯಾದ ನಿರ್ವಹಣೆ ಇಲ್ಲದಿದ್ದರೆ ಅದು ಕೆಲಸ, ನೆಮ್ಮದಿ ಹಾಗೂ ಪ್ರಾಣವನ್ನೂ ಕಸಿದುಕೊಳ್ಳಬಹುದು ಎಂಬುದಕ್ಕೆ ಸಿ.ಜೆ.ರಾಯ್ ಅವರ ಆತ್ಮಹತ್ಯೆಯೇ ಉದಾಹರಣೆಯಾಗಿದೆ. ಹಣವನ್ನು ಸಂಪಾದಿಸುವುದಷ್ಟೇ ಅಲ್ಲ, ಅದನ್ನು ಆನಂದಿಸುವ ಹಕ್ಕೂ ನನ್ನದು ಎಂಬ ಸಂದೇಶವನ್ನು ರಾಯ್ ಸ್ಪಷ್ಟವಾಗಿ ನೀಡುತ್ತಿದ್ದರು. ಮುಖ್ಯವಾಗಿ ಯುವಕರಿಗೆ ಸ್ಛೂರ್ತಿದಾಯಕ ವ್ಯಕ್ತಿಯಾಗಿದ್ದರು. ಸಾಮಾನ್ಯ ಹಿನ್ನೆಲೆಯಿಂದ ಬಂದವನೂ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂಬ ಭರವಸೆಯನ್ನು ಮೂಡಿಸಿದ್ದರು. ನಿರಂತರ ವಿಚಾರಣೆ ಮತ್ತು ಒತ್ತಡವೇ ಈ ದುರ್ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ, ಉದ್ಯಮಿಗಳಿಗೆ ಐಟಿಯ ಒತ್ತಡ ಹಾಗೂ ತಲೆಬಿಸಿ ಹೊಸದೇನು ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಂದು ಶಾಲೆಯ ಮುಂಭಾಗ ಕುಳಿತು ಜಗತ್ತನ್ನು ಗೆಲ್ಲುವ ಕನಸು ಕಂಡ ಆ ಬಾಲಕ, ಇಂದು ಆ ಕನಸುಗಳ ಭಾರವನ್ನೇ ಹೊತ್ತುಕೊಂಡು ಜಗತ್ತಿಗೆ ವಿದಾಯ ಹೇಳಿರುವುದು ವಿಪರ್ಯಾಸ. ಕಾನ್ಛಿಡೆಂಟ್ ಹೆಸರಿನ ದೊಡ್ಡ ಗ್ರೂಪ್ ಅನ್ನು ಹುಟ್ಟು ಹಾಕಿದ್ದ ವ್ಯಕ್ತಿಯ ಜೀವನದಲ್ಲಿ ಬದುಕುವ ಕಾನ್ಛಿಡೆಂಟ್ ಇಲ್ಲದಂತಾಗಿದ್ದು ದುರಂತವೇ ಸರಿ.

-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

 

Tags:
error: Content is protected !!