Mysore
23
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಒಳ ಮೀಸಲಾತಿ ಜಾರಿ; ನೇಮಕಾತಿ ತ್ವರಿತವಾಗಿ ನಡೆಯಲಿ

ಓದುಗರ ಪತ್ರ

ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬುಧವಾರ ವಿಧಾನಸೌಧದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ.೬ ರಷ್ಟು, ಸ್ಪೃಶ್ಯ ಸಮುದಾಯಕ್ಕೆ ಶೇ. ೫ರಷ್ಟು ಮೀಸಲಾತಿ ನಿಗದಿಪಡಿಸಿದೆ.

ಒಳ ಮೀಸಲಾತಿ ಹೊರಡಿಸಿದ ಕೂಡಲೇ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಕಾದು ಕುಳಿತಿದ್ದ ನಿರುದ್ಯೋಗಿ ಯುವ ಜನರು ರಾಜ್ಯ ಸರ್ಕಾರದ ನಿರ್ಧಾರದಿಂದ ನಿಟ್ಟುಸಿರು ಬಿಡುವಂತಾಗಿದೆ. ಜತೆಗೆ ವಯೋಮಿತಿ ಮೀರುತ್ತಿದೆ ಎಂದು ಆತಂಕದಲ್ಲಿದ್ದವರಿಗೆ ವಯೋಮಿತಿಯನ್ನು ಒಂದು ಬಾರಿ ಸಡಿಲ ಮಾಡುವುದಾಗಿ ಸಿಎಂ ಹೇಳಿರುವುದು ಸಮಾಧಾನ ತಂದಿದೆ.

-ಪಿ.ಸಿ.ಕಂಗಾಣಿಸೋಮು, ಕ್ಯಾತಮಾರನಹಳ್ಳಿ, ಮೈಸೂರು

Tags:
error: Content is protected !!