Mysore
15
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ರಾಜ್ಯ ಸರ್ಕಾರ ಇನ್ನೂ ಟೇಕಾಫ್‌ ಆಗಿಲ್ಲ: ಶಾಸಕ ಅರಗ ಜ್ಞಾನೇಂದ್ರ ವಾಗ್ದಾಳಿ

Araga jnanendra

ಬೆಂಗಳೂರು: ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಇನ್ನೂ ರಾಜ್ಯ ಸರ್ಕಾರ ಟೇಕಪ್ ಆಗಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಯ ಸಾಧನೆಯನ್ನೇ ಎರಡು ವರ್ಷದಿಂದ ಟಾಮ್ ಟಾಮ್ ಹೊಡೆಯುತ್ತಾ ಬಂದಿದ್ದೀರಿ. ಇನ್ನು ಮೂರು ವರ್ಷಗಳ ಕಾಲ ಇದನ್ನೇ ಹೇಳುತ್ತೀರಾ ಎಂದು ಪ್ರಶ್ನಿಸಿದರು.

ಬಜೆಟ್‌ಗೂ ಮುನ್ನ ಹಾಗೂ ಬಜೆಟ್ ನಂತರ ಜನರಿಗೆ ತೆರಿಗೆ ವಿಧಿಸುತ್ತೀರಿ. ಬೇರೆ ಬೇರೆ ರೀತಿಯಲ್ಲಿ ತೆರಿಗೆ ಹಾಕಿ ಜನರ ಕಿವಿಯ ಮೇಲೆ ಹೂವು ಇಡುವ ಕೆಲಸವಾಗಿದೆ ಎಂದು ಆರೋಪಿಸಿದರು.

ಎಲ್ಲಾ ಭಾಗದ ಶಾಸಕರಿಗೆ ಅನುದಾನ ನೀಡಿದರೆ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಅಂಗವಿಕಲವಾಗುತ್ತದೆ ಎಂದು ಟೀಕಿಸಿದರು.

Tags:
error: Content is protected !!