Mysore
30
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಓದುಗರ ಪತ್ರ: ಬಸ್ ತಂಗುದಾಣದಲ್ಲಿ ಸ್ವಚ್ಛತೆ ಕಾಪಾಡಿ

ಓದುಗರ ಪತ್ರ

ಮೈಸೂರಿನ ಜೆ. ಪಿ.ನಗರದ ಪ್ರಮುಖ ತಂಗುದಾಣವಾದ ಗೊಬ್ಬಳಿ ಮರ ತಂಗುದಾಣವು ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ. ಬಸ್ ತಂಗುದಾಣದ ಗೋಡೆಗಳಿಗೆ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

ಗೋಡೆ ಪಕ್ಕದಲ್ಲಿ ಜೋಡಿಸಿರುವ ಮೂಟೆಗಳು ತಂಗುದಾಣದ ಅಂದಗೆಡಿಸಿವೆ. ತಂಗುದಾಣದಲ್ಲಿ ವಿದ್ಯುತ್ ದೀಪಗಳ ಸೌಲಭ್ಯವಿಲ್ಲದೆ ರಾತ್ರಿ ವೇಳೆ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಬಸ್ ತಂಗುದಾಣದಲ್ಲಿ ಸ್ವಚ್ಛತೆಯನ್ನು ಕಾಪಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.

– ಕೆ. ಗಣೇಶ್ ಕುಮಾರ್, ಜೆ.ಪಿ.ನಗರ, ಮೈಸೂರು

Tags:
error: Content is protected !!