Mysore
23
mist

Social Media

ಬುಧವಾರ, 25 ಫೆಬ್ರವರಿ 2026
Light
Dark

ಮಾಜಿ ಸಚಿವ ಜನಾರ್ಧನ ರೆಡ್ಡಿ ಶಾಸಕತ್ವಕ್ಕೆ ಮರುಜೀವ

ಬೆಂಗಳೂರು: ತೆಲಂಗಾಣ ಹೈಕೋರ್ಟ್‍ನ ಆದೇಶದ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿ ಅವರ ಶಾಸಕತ್ವಕ್ಕೆ ಮರುಜೀವ ದೊರೆತಿದೆ.

ಅಕ್ರಮ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ಪ್ರಧಾನ ನ್ಯಾಯಾಲಯ ನೀಡಿದ್ದ ಘೋಷಿತ ಅಪರಾಧಿ ಎಂಬ ತೀರ್ಪಿನ ಪರಿಣಾಮ ಗಂಗಾವತಿ ವಿಧಾನಸಭಾ ಕ್ಷೇತ್ರದ ಸದಸ್ಯತ್ವದಿಂದ ಜನಾರ್ಧನ ರೆಡ್ಡಿ ಅವರನ್ನು ಅನರ್ಹಗೊಳಿಸಲಾಗಿತ್ತು.

ತೆಲಂಗಾಣ ಹೈಕೋರ್ಟ್ ಸಿಬಿಐ ವಿಶೇಷ ಪ್ರಧಾನ ನ್ಯಾಯಾಲಯದ ಆದೇಶವನ್ನು ಅಮಾನತ್ತಿನಲ್ಲಿಟ್ಟಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದಿನ ತೀರ್ಪಿಗೆ ಒಳಪಟ್ಟು ಜನಾರ್ಧನ ರೆಡ್ಡಿ ಶಾಸಕತ್ವ ಅನರ್ಹಗೊಳಿಸಿದ್ದ ಆದೇಶವನ್ನು ವಿಧಾನಸಭೆ ಸಚಿವಾಲಯ ತಡೆ ಹಿಡಿದಿದೆ.

ಈ ಸಂಬಂಧ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅಧಿಸೂಚನೆ ಹೊರಡಿಸಿದ್ದಾರೆ. ಹೀಗಾಗಿ ಜನಾರ್ಧನ ರೆಡ್ಡಿ ಶಾಸಕತ್ವ ಸದ್ಯಕ್ಕೆ ಉಳಿದುಕೊಂಡಂತಾಗಿದೆ.

Tags:
error: Content is protected !!