ಮೈಸೂರು: ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಸೆಂಟ್ ಥಾಮಸ್ ಸಿ.ಬಿ.ಎಸ್.ಇ ಪಿಯು ಕಾಲೇಜಿನ ವಿದ್ಯಾರ್ಥಿನಿ ತನ್ಮಯಿ ಪ್ರದೀಪ್ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 1528 ನೇ ರ್ಯಾಂಕ್ ಪಡೆದಿದ್ದಾರೆ.
ನಗರದ ಬೃಂದಾವನ ಬಡಾವಣೆ ನಿವಾಸಿಯಾದ ಸಾಫ್ಟ್ ವೇರ್ ಎಂಜಿನಿಯರ್ ಪ್ರದೀಪ್ ನಾಗರಾಜ್ ಹಾಗೂ ರಾಧಾ ಸಿ.ಆರ್. ದಂಪತಿ ಪುತ್ರಿಯಾದ ತನ್ಮಯಿ ಪ್ರದೀಪ್ ಭವಿಷ್ಯದಲ್ಲಿ ಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ಪರಿಣಿತಿ ಪಡೆಯುವ ಹಂಬಲ ಹೊಂದಿದ್ದಾರೆ. ತನ್ಮಯಿ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 598 ಅಂಕ ಪಡೆದಿದ್ದಾರೆ. ಆಕಾಶ್ ಇನ್ಸಿಟಿಟ್ಯೂಟ್ನಲ್ಲಿ ತರಬೇತಿ ಪಡೆದುಕೊಂಡಿದ್ದರು. ತನ್ಮಯಿ ಸಿಇಟಿಯಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ.
ನೀಟ್ ನಲ್ಲಿ ಉತ್ತಮ ರ್ಯಾಂಕ್ ಪಡೆದ ಹಿನ್ನೆಲೆಯಲ್ಲಿ ಆಕಾಶ್ ಇನ್ಸ್ಟಿಟ್ಯೂಟ್ ಮೈಸೂರಿನ ಶಾಖೆಯಲ್ಲಿ ತನ್ಮಯಿ ಪ್ರದೀಪ್ ಹಾಗೂ ಅವರ ಪೋಷಕರನ್ನು ಸನ್ಮಾನಿಸಲಾಯಿತು.
ಈ ಬಾರಿ ನೀಟ್ ಪ್ರಶ್ನೆ ಪತ್ರಿಕೆ ತುಂಬಾ ಕಠಿಣವಾಗಿತ್ತು. ಸ್ಕೋರ್ ಕಡಿಮೆಯಾದರೂ ಒಳ್ಳೆಯ ರ್ಯಾಂಕಿಂಗ್ ಬಂದಿದೆ. ನನ್ನ ರ್ಯಾಂಕಿಂಗ್ಗೆ ಏಮ್ಸ್ನಲ್ಲಿ ಸೀಟು ಸಿಗುವ ನಿರೀಕ್ಷೆ ಇದೆ. ಭವಿಷ್ಯದಲ್ಲಿಮಕ್ಕಳ ತಜ್ಞೆಯಾಗುವ ಆಸೆ ಇದೆ. ಆದರೆ, ಮುಂದೆ ಏನಾಗುತ್ತದೆ ಎಂಬುದು ಕಾದುನೋಡಬೇಕಿದೆ ಎಂದು ತನ್ಮಯಿ ಪ್ರದೀಪ್ ತಿಳಿಸಿದರು.





