Mysore
21
overcast clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಶಾ ವಿರುದ್ಧ ರಾಹುಲ್‌ ಆಕ್ಷೇಪಾರ್ಹ ಹೇಳಿಕೆ ಪ್ರಕರಣ: ವಿಚಾರಣೆ ಮಾ.6ಕ್ಕೆ ಮುಂದೂಡಿಕೆ

ಸುಲ್ತಾನ್‌ಪುರ: ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ವಿರುದ್ದ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಯನ್ನು ಮಾ.6ಕ್ಕೆ ಮುಂದೂಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಫೆ.11ರಂದು ದೂರುದಾರರನ್ನು ಪಾಟೀಸವಾಲು ಮಾಡಲಾಯಿತು ಎಂದು ರಾಹುಲ್‌ ಪರ ವಕೀಲ ಕಾಶಿ ಪ್ರಸಾದ್‌ ಶುಕ್ಲಾ ಹೇಳಿದ್ದಾರೆ.

ಸವಾಲಿನ ಬಳಿಕ ಫೆ.24ರಂದು ವಿಚಾರಣೆ ನಿಗದಿಯಾಗಿತ್ತು. ಆದರೆ, ದೂರುದಾರರ ಪರ ವಕೀಲ ಸಂತೋಷ್‌ ಕುಮಾರ್‌ ಪಾಂಡೆ ನ್ಯಾಯಾಲಯಕ್ಕೆ ಹಾಜರಾಗದೇ ಇರುವ ಕಾರಣ ವಿಚಾರಣೆಯನ್ನು ಮಾರ್ಚ್‌6ಕ್ಕೆ ಮುಂದೂಡಲಾಗಿದೆ.

2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಅಮಿತ್‌ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ದೆಹಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಗನುಮಗಿರಿ ನಿವಾಸಿಯಾಗಿರುವ ಸ್ಥಳೀಯ ಬಿಜೆಪಿ ನಾಯಕ ಮಿಶ್ರಾ ದೂರು ದಾಖಲಿಸಿದ್ದರು.

Tags:
error: Content is protected !!