ಮೈಸೂರಿನ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪದ ಬಸ್ ನಿಲ್ದಾಣದ ಪಕ್ಕದಲ್ಲಿನ ಮರವೊಂದು ಬೀಳುವ ಹಂತದಲ್ಲಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ಮರದ ಬುಡ ಗೆದ್ದಲು ಹಿಡಿದಿದ್ದು, ಗಾಳಿ ಬೀಸಿದಂತೆಲ್ಲ ಮರ ಅಲುಗಾಡುತ್ತಿದೆ. ಈಗ ಮಳೆಗಾಲವಾದ್ದರಿಂದ ಮರ ಬೀಳುವ ಅಪಾಯದಲ್ಲಿದೆ.
ಈ ಮರದ ಕೆಳಗೆ ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಓಡಾಡುತ್ತಿರುತ್ತಾರೆ.
ಕೆಲವರು ಅಲ್ಲಿಯೇ ನಿಂತಿದ್ದು, ಬಸ್ ಹತ್ತುತ್ತಾರೆ. ಈ ವೇಳೆ ಮರವೇನಾದರೂ ಧರೆಗುರುಳಿ ಅನಾಹುತ ಸಂಭವಿಸಿದರೆ ಯಾರು ಹೊಣೆ? ಅರಣ್ಯ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆಯವರು ಈ ಮರವನ್ನು ತೆರವುಗೊಳಿಸಿ ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಬೇಕು.
-ಬಾಲಸುಬ್ರಹ್ಮಣ್ಯ, ಕುವೆಂಪುನಗರ, ಮೈಸೂರು.





