ಮೈಸೂರು : ಶ್ರೀನಿವಾಸ ಪ್ರಸಾದ್ ಅವರು ಯಾವುದೇ ಕಾರಣಕ್ಕು ಕಾಂಗ್ರೆಸ್ಗೆ ಬೆಂಬಲ ಸೂಚಿಸಿಲ್ಲ ಎಂದು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ವಿ.ಶೈಲೇಂದ್ರ ಹೇಳಿದರು.
ನಗರ ಜಿಲ್ಲಾ ಎಸ್ ಸಿ ಮೋರ್ಚಾ ವತಿಯಿಂದ ಇಂದು ಪತ್ರಿಕಾ ಗೋಷ್ಠಿ ಕರೆಯಲಾಗಿದ್ದು ಈ ವೇಳೆ ಮಾತನಾಡಿದ ಅವರು, ಸಂಸದರಾದ ವಿ ಶ್ರೀನಿವಾಸ್ ಪ್ರಸಾದ್ ರವರು ಬಿಜೆಪಿ ಸಂಸದರು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿಲ್ಲ ಎಂದರು..
ಕಾಂಗ್ರೆಸ್ ನವರು ಮಾಡಿರುವ ದ್ರೋಹಕ್ಕೆ ಬೆಂಬಲ ಸೂಚಿಸಿಲ್ಲ ಹಾಗಾಗಿ ಅವರ ಅಭಿಮಾನಿ ಬಳಗ ಅಂತ ಹೇಳಿ ಅವರು ಹೇಳದಿರುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾ ಶ್ರೀನಿವಾಸ್ ಪ್ರಸಾದ್ ರವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ವಿ.ಶೈಲೇಂದ್ರ ,ಮೈಸೂರು ನಗರ ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಮರಿಯಪ್ಪ, ಸ್ವಾಮಿ,ಮಾಧ್ಯಮ ಮಹದೇವಸ್ವಾಮಿ ,ನಿಂಗರಾಜು ಉಪಸ್ಥಿತರಿದ್ದರು.





