Mysore
22
overcast clouds

Social Media

ಮಂಗಳವಾರ, 04 ಆಗಸ್ಟ್ 2026
Light
Dark

ಪ್ರತ್ಯೇಕ ರಾಷ್ಟ್ರದ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಸಂಸದ ಡಿ.ಕೆ.ಸುರೇಶ್‌ !

ನವದೆಹಲಿ : ಕೇಂದ್ರದ ಮಂಧ್ಯಂತರ ಬಜೆಟ್‌ ಬೆನ್ನಲ್ಲೇ  ಪ್ರತ್ಯೇಕ ರಾಷ್ಟ್ರದ ಕುರಿತು ಸಂಸದ ಡಿ.ಕೆ.ಸುರೇಶ್‌ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಈ ಬಗ್ಗೆ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಭಾರತದ ಹಣ ಉತ್ತರ ಭಾರತಕ್ಕೆ ಹಂಚುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪ್ರತ್ಯೇಕ ರಾಷ್ಟ್ರದ ಕೂಗು ಬೇಡಿಕೆ ಇಡಬೇಕಾಗುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಭಾರತ ಹಣವನ್ನು ಉತ್ತರ ಭಾರತಕ್ಕೆ ಕಳುಹಿಸುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ.ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಪ್ರತ್ಯೇಕ ದೇಶದ ಕೂಗು ಎತ್ತಿದ್ದಾರೆ.

ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯ ಆಗುತ್ತಿರುವುದನ್ನು ನಾವು ಪ್ರತಿಯೊಂದು ಹಂತದಲ್ಲಿ ನೋಡುತ್ತಿದ್ದೇವೆ. ನಮ್ಮ ಪಾಲು ಏನು ಸಿಗಬೇಕಾಗಿದೆ ಅಭಿವೃದ್ಧಿಯ ಹಣ ಸಿಗಬೇಕಾಗಿರುವುದು ಉತ್ತರ ಭಾರತದಲ್ಲಿ ಹಂಚುತ್ತಿದ್ದಾರೆ.

ನಮಗೆ ಎಲ್ಲಾ ವಿಚಾರಗಳು ಕೂಡ ಅನ್ಯಾಯ ಆಗುತ್ತಿದೆ. ಮುಂದಿನ ದಿನಗಳಲ್ಲಿ ನಾವು ಖಂಡಿಸಲಿಲ್ಲವಾದರೆ ಪ್ರತ್ಯೇಕವಾದ ರಾಷ್ಟ್ರ ಬೇಡಿಕೆ ಇಡಬೇಕಾಗುತ್ತದೆ ಎಂದರು.

ಇವತ್ತಿನ ಹಣಕಾಸು ಹಂಚುತ್ತಿರುವ ಪರಿಸ್ಥಿತಿ ನೋಡಬೇಕಾದರೆ ಯಾವುದೇ ವಿಚಾರಗಳಾಗಲಿ ನಮ್ಮ ರಾಜ್ಯಗಳ ಹಣ ಉತ್ತರ ಭಾರತಕ್ಕೆ ಹೆಚ್ಚು ಕೊಡುತ್ತಿರುವುದು ನಮಗೆ ಅನ್ಯಾಯ ಆಗುತ್ತಿದೆ.

ನಮ್ಮ ಮೇಲೆ ಹಿಂದಿ ಹೇರಿಕೆ ಮಾಡತಕ್ಕದ್ದು ನಿನ್ನೆ ರಾಜ್ಯಪಾಲರು ನಮ್ಮ ಕನ್ನಡದ ನಾಮಫಲಕ ಅಳವಡಿಕೆ ಕುರಿತು ಸುಗ್ರೀವಾಜ್ಞೆಗೆ ಅಂಕಿತ ಹಾಕಲು ತಿರಸ್ಕಾರ ಮಾಡಿದರು ಏತಕ್ಕಾಗಿ ಅವರು ತಿರಸ್ಕಾರ ಮಾಡಿದ್ದಾರೆ? ಎಂದು ಪ್ರಶ್ನಿಸಿದರು.

ಎಲ್ಲಾ ರಾಜ್ಯದ ರಾಜ್ಯಪಾಲರು ಇದೇ ತರ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಹೋದರೆ ನಮ್ಮ ಕನ್ನಡಿಗರಿಗೆ ಕೊಡುವ ಗೌರವ ಏನು? ತುಂಬಾ ನಮ್ಮ ಹಣಕಾಸು ಪರಿಸ್ಥಿತಿ ನಮ್ಮಿಂದ ನಾಲ್ಕು ಲಕ್ಷಕ್ಕೂ ಹೆಚ್ಚು ಕೋಟಿ ತೆರಿಗೆ ರೂಪದಲ್ಲಿ ಪಡೆಯುತ್ತಿದ್ದಾರೆ.

ನಮಗೆ ಕೊಡುತ್ತಿರುವುದು ಎಷ್ಟು? ಇದನ್ನು ಪ್ರಶ್ನೆ ಮಾಡಬೇಕಾಗುತ್ತದೆ ಇದು ಸರಿ ಹೋಗಲಿಲ್ಲ ಅಂದರೆ ಪ್ರತ್ಯೇಕ ರಾಷ್ಟ್ರದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!