Mysore
25
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

ಕಾಂತಾರ ಗೆಲುವು ದುಖಃವನ್ನೂ ಕೊಟ್ಟಿದೆ : ಹೀಗಂದಿದ್ಯಾಕೆ ರಿಷಬ್ ಶೆಟ್ಟಿ ?

ಕಾಂತಾರ ಸಿನಿಮಾ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ದುಖಃವನ್ನೂ ಕೊಟ್ಟಿದೆ ಎಂದು ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಬೇಸರ ಹೊಹೊರ ಹಾಕಿದ್ದಾರೆ.

ನಂದಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಿಷಬ್‌ ಶೆಟ್ಟಿ, ನನಗೆ ಕಾಂತಾರ ಸಿನಿಮಾದ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ನೋವನ್ನೂ ಕೂಡ ಕೊಟ್ಟಿದೆ ಎಂದಿದ್ದಾರೆ.

ದೈವಾರಾಧನೆಯ ಬಗ್ಗೆ ಕನ್ನಡ, ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಈಗಿನ ಕಾಲಘಟ್ಟದಲ್ಲಿ ದೈವಾರಾಧನೆಯ ಶ್ರೇಷ್ಠತೆ ಹೇಳುವ ಸಲುವಾಗಿ ಈ ಸಿನಿಮಾ ಮಾಡಿದ್ದೀನಿ. ಆದರೆ ಕಾಂತಾರ ಬಳಿಕ ದೈವದ ಹಾಡಿಗೆ ತಪ್ಪಾಗಿ ರೀಲ್ಸ್‌ ಮಾಡೋದು ಜಾಸ್ತಿ ಆಗಿದೆ. ದೈವಾರಾಧನೆಗೆ ಅಪಮಾನ ಮಾಡಬೇಡಿ. ಪಂಜುರ್ಲಿ, ದೈವಾರಾಧನೆ, ಕೋಲ ನಮ್ಮ ನೆಲದ ಮೂಲ ಸಂಸ್ಕೃತಿ. ನಮ್ಮ ನೆಲದ ಕಥೆ ಹೇಳಬೇಕು ಅಂತಾ ಈ ಸಿನಿಮಾ ಮಾಡಿದ್ದೀನಿ ದಯವಿಟ್ಟು ದೈವದ ಹಾಡಿಗೆ ತಪ್ಪಾಗಿ ರೀಲ್ಸ್‌ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.

ಕಾಂತಾರ 2ನಲ್ಲಿ ಕರಾವಳಿ ಭಾಗದ ಜನರ ದೈವಾರಾಧನೆ ಭೂತಕೋಲದ ಮಹತ್ವವನ್ನು ಸಾರಿ ಹೇಳಿದ್ದ ನಿರ್ದೇಶಕ ರಿಷಬ್‌ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು. ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.

ನವೆಂಬರ್‌ 27 ರಂದು ಕಾಂತಾರ ಚಾಪ್ಟರ್‌ ಒಂದರ ಮುಹೂರ್ತ ನೆರವೇರಿತ್ತು. ಕಾಂತಾರ ಚಿತ್ರತಂಡ ವಿಶೇಷವಾದ ಫಸ್ಟ್‌ಲುಕ್‌ ಟೀಸರ್‌ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್‌ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!