Mysore
21
broken clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಅಮಿತ್ ಶಾ ಭೇಟಿ, ಇಂದು ಮತ್ತು ನಾಳೆ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ

ಮಂಡ್ಯ: ನಾಳೆ ಮಂಡ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆ ಇಂದು ಮತ್ತು ನಾಳೆ ಮಂಡ್ಯ ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಿ ಡಿಸಿ ಡಾ.ಗೋಪಾಲಕೃಷ್ಣ ಆದೇಶ ನೀಡಿದ್ದಾರೆ. ನಾಳೆ ಮಂಡ್ಯ ವಿವಿ ಮೈದಾನದಲ್ಲಿ ಬಿಜೆಪಿ ಸಮಾವೇಶ ಆಯೋಜನೆ ಮಾಡಲಾಗಿದ್ದು ಸಮಾವೇಶದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಭಾಗಿಯಾಗಲಿದ್ದಾರೆ. ಅಮಿತ್ ಶಾಗೆ Z+ ಭದ್ರತೆ ಇರುವ ಹಿನ್ನೆಲೆ ಮಂಡ್ಯ ವಿವಿಗೆ ರಜೆ ಘೋಷಿಸಲಾಗಿದೆ.

ಹಳೇ ಮೈಸೂರು ಟಾರ್ಗೆಟ್​.. ದಕ್ಷಿಣ ದಂಡಯಾತ್ರೆಗೆ ‘ಚಾಣಕ್ಯ’ ರೆಡಿ ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ​ ಅವರು, ಇಲ್ಲಿ ಕಮಲ ಅರಳಿಸಲೇಬೇಕು ಅಂತ ಪಣತೊಟ್ಟಂತಿದೆ. ಯಾಕಂದ್ರೆ ಈ ಹಿಂದೆ ಆಗಸ್ಟ್​ನಲ್ಲಿ ರಾಜ್ಯಕ್ಕೆ ಬಂದಿದ್ದ ಅಮಿತ್​ ಶಾ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆಗಾಗಿ ನಾಯಕರಿಗೆ ಟಾಸ್ಕ್​ ಕೊಟ್ಟಿದ್ರು. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವಿಗೆ ರೂಟ್​ ಮ್ಯಾಪ್ ಸಿದ್ಧ ಮಾಡಬೇಕು. ನೀವೂ ಬಿಟ್ರೂ ನಾನು ಹಳೇ ಮೈಸೂರು ಭಾಗವನ್ನ ಬಿಡೋದಿಲ್ಲ ಅಂತ ಖಡಕ್​ ಸಂದೇಶ ಕೊಟ್ಟಿದ್ರಂತೆ. ಇದೇ ಕಾರಣಕ್ಕೆ ಅಲರ್ಟ್ ಆಗಿರುವ ರಾಜ್ಯ ಕೇಸರಿ ದಕ್ಷಿಣದಲ್ಲಿ ದಂಡಯಾತ್ರೆಗೆ ಸನ್ನದ್ಧವಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!