ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಯಲ್ಲಿ (ಸಿಮ್ಸ್) ಎನ್ಸಿಸಿ ದಿನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.
ಎನ್ಸಿಸಿಯು ೧೩ ಕಾರ್ಬೆಟಲಿಯನ್ ಹಾಗೂ ಸಿಮ್ಸ್ ವತಿಯಿಂದ ರಕ್ತನಿಧಿ ಕೇಂದ್ರದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 27ಮಂದಿ ರಕ್ತದಾನ ಮಾಡಿದರು.
ಕರ್ನಾಟಕ-ಗೋವಾ ಬೆಟಾಲಿಯನ್ನ ವಿದ್ಯಾರ್ಥಿಗಳು ಹಾಗೂ ಮಿಲಿಟರಿ ಪಡೆಯವರು, ಎನ್ಸಿಸಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಸಿಮ್ಸ್ ಎನ್ಸಿಸಿ ಅಧಿಕಾರಿ ಡಾ.ಮಾರುತಿ, ಡಾ. ವೇದಾಶ್ರೀ, ಡಾ.ವಾಣಿಶ್ರೀ, ಡಾ. ಸ್ನೇಹ, ರಕ್ತನಿಧಿ ಕೇಂದ್ರದ ಡಾ.ಮಹೇಶ್, ಪ್ರಯೋಗಾಲಯದ ವಿ.ತೇಜಸ್, ಆನಂದ್, ಕುಮಾಸ್ವಾಮಿ, ಮೋಹನ್ಕುಮಾರ್, ಜಗದೀಶ್ ನಾಯಕ್, ಶಿವಕುಮಾರ್, ಜಾನ್ದಾಸ್, ರವಿಕಿರಣ್, ಮಧು, ವೆಂಕಟೇಶ್, ಹೇಮಂತ್, ಮಹೇಶ್, ಸತ್ಯ ಉಪಸ್ಥಿತರಿದ್ದರು.
ಬೆಟಾಲಿಯನ್ ಕರ್ನಲ್ ಆಶುತೋಷ್ ದೇವ್ರಾನಿ, ಮೇಜರ್ ಮಂಜುನಾಥ್, ಕರ್ನಲ್ ಮೆನನ್ ಮೊದಲಾದವರು ಭಾಗವಹಿಸಿದ್ದರು.





