ಮೈಸೂರು : ನಗರದ ಮೇಟಗಳ್ಳಿ ಹಳೇ ಗ್ರಾಮದ ರಾಜ ಕಾಲುವೆ ಒತ್ತುವರಿಯಾಗಿದ್ದು. ಇದರಿಂದಾಗಿ ಸಮೀಪದ ಕಾರ್ಖಾನೆಗಳಿಂದ ಬರುವ ರಾಸಾಯನಿಕ ನೀರು ಕಾಲುವೆಯಲ್ಲಿ ತುಂಬುತ್ತಿರುವ ಪರಿಣಾಮ ಇಲ್ಲಿ (ಲಿಂಗಪ್ಪ ದೇವಸ್ಥಾನದ ಮೋರಿ) ನೀರು ಬಿಡಲಾಗಿದೆ.
ಇದರಿಂದಾಗಿ ಇಲ್ಲಿ ವಾಸಿಸುತ್ತಿರುವ ಸ್ಥಳೀಯರು ದಿನನಿತ್ಯ ಉಸಿರಾಟದ ಸಮಸ್ಯೆಯಿಂದ ಬಳಲುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.