Mysore
29
overcast clouds

Social Media

ಶುಕ್ರವಾರ, 03 ಜುಲೈ 2026
Light
Dark

ಮಂಡ್ಯದ ಬೂದನೂರು ನಿವೇಶನರಹಿತರಿಂದ ಜೈಲ್‌ಭರೋ ಪ್ರತಿಭಟನೆ

ಮಂಡ್ಯ :ತಾಲೂಕಿನ ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಸರಕಾರಿ ಭೂಮಿಯಲ್ಲಿ ನಿವೇಶನ ಹಂಚಿಕೆಗೆ ಕ್ರಮ ವಹಿಸುವಂತೆ ಒತ್ತಾಯಿಸಿ ನಗರದಲ್ಲಿಅ.19ರಂದು, ಜೈಲ್‌ ಭರೋ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸ್ವಂತ ಮನೆ-ನಮ್ಮ ಹಕ್ಕು ಹೋರಾಟ ಸಮಿತಿಯ ಕಾನೂನು ಸಲಹೆಗಾರ, ವಕೀಲ ಜೆ.ರಾಮಯ್ಯ ತಿಳಿಸಿದ್ದಾರೆ.

ನಮ್ಮ ಹಕ್ಕು ನಮ್ಮ ಹೋರಾಟ ಸಮಿತಿಯು ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದ ಪರಿಣಾಮ ಮಂಡ್ಯ ಜಿಲ್ಲೆ ಬೂದನೂರು ಗ್ರಾಮದ ಸರ್ವೇ ನಂ.190ರಲ್ಲಿನ 2 ಎಕರೆ ಜಮೀನನನ್ನು ಮಾನವ ಅಭಿವೃದ್ಧಿಗೆ ಪೂರಕ ಕೆಲಸಗಳಿಗೆ ಬಳಸಲು ಕಾಯ್ದಿರಿಸಲಾಗಿದೆ. ಆದರೆ ಈ ಭೂಮಿಯನ್ನು ನಿವೇಶನ ರಹಿತರಿಗೆ ಹಸ್ತಾಂತರಿಸಲು ಕಂದಾಯ ಅಧಿಕಾರಿಗಳು ತೊಡಕಾಗಿದ್ದಾರೆ ಎಂದು ಸಮಿತಿಯ ಕಾನೂನು ಸಲಹೆಗಾರ, ವಕೀಲ ಜೆ.ರಾಮಯ್ಯ ಆರೋಪಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!