Mysore
24
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಭೂಕುಸಿತದಿಂದ ತತ್ತರಿಸಿದ್ದ ವಯನಾಡಿನಲ್ಲಿ ಮತ್ತೊಂದು ಭೀತಿ

ತಿರುವನಂತಪುರಂ: ಈಗಷ್ಟೇ ತಾನೇ ಭೂಕುಸಿತದ ಕರಾಳ ಭೀಕರತೆಯನ್ನು ಅನುಭವಿಸಿದ ವಯನಾಡಿಗೆ ಈಗ ಮತ್ತೊಂದು ಆತಂಕ ಎದುರಾಗಿದೆ. ನಿನ್ನೆ ವಯನಾಡಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.

ಭೂಕುಸಿತ ಸಂಭವಿಸಿದ ಚೂರಲ್ಮಲಾ-ಮುಂಡಕ್ಕೈ ಪ್ರದೇಶಗಳಿಂದ ಸುಮಾರು 15 ರಿಂದ 20 ಕಿಲೋ ಮೀಟರ್‌ ದೂರದಲ್ಲಿರುವ ಅಂಬಲವಾಯಲ್-ಎಡಕಲ್‌ ಪ್ರದೇಶಗಳಲ್ಲಿ ನಿನ್ನೆ ಗುಡುಗು ಸದ್ದು ಕೇಳಿಸಿದೆ ಎನ್ನಲಾಗಿದೆ.

ಹತ್ತಿರದ ಕೋಝಿಕ್ಕೋಡ್‌ ಮತ್ತು ಫಾಲಕ್ಕಾಡ್‌ ಜಿಲ್ಲೆಗಳ ಭಾಗಗಳಿಂದ ಇದೇ ರೀತಿಯ ಶಬ್ದಗಳು ಕೇಳಿಬಂದಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಶಬ್ದ ಕೇಳಿ ಅಂಬಲವಾಯಲ್-ಎಡಕಲ್‌ ಭಾಗದ ಜನರು ಮನೆಯಿಂದ ಹೊರ ಬಂದಿದ್ದು, ಭಯಭೀತರಾಗಿದ್ದಾರೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪರಿಹಾರ ಶಿಬಿರದಲ್ಲಿ ಹಲವು ಕುಟುಂಬಗಳು ಆಶ್ರಯ ಪಡೆದಿದೆ.

ಶಬ್ಧ ಬಂದ ಕೂಡಲೇ ಹಲವು ಮನೆಯ ಕಿಟಕಿಗಳ ಗಾಜುಗಳು ಒಡೆದು ಹೋಗಿರುವ ಅನುಭವವಾಗಿದೆ. ಭೂಕುಸಿತದ ತೀವ್ರತೆಯನ್ನು ಮೌಲ್ಯಮಾಪನ ಮಾಡಲು ಕೇಂದ್ರದ ತಜ್ಞರ ತಂಡ ಈಗಾಗಲೇ ವಯನಾಡು ಪ್ರದೇಶಕ್ಕೆ ಭೇಟಿ ನೀಡಿದೆ.

 

ವರದಿ ಬಂದ ಬಳಿಕವಷ್ಟೇ ಇದು ಭೂಕಂಪನವ, ಇಲ್ಲ ಪ್ರಕೃತಿಯ ವಿಸ್ಮಯವೇ ಎಂಬುದು ತಿಳಿದು ಬರಲಿದೆ.

 

Tags:
error: Content is protected !!