Mysore
27
broken clouds

Social Media

ಮಂಗಳವಾರ, 16 ಡಿಸೆಂಬರ್ 2025
Light
Dark

ಕಾಲ್ತುಳಿತ ದುರಂತ ಪ್ರಕರಣ: ಆರ್‌ಸಿಬಿ, ಡಿಎನ್‌ಎ ಮಾಲೀಕರಿಗೆ ಸಿಐಡಿ ನೋಟಿಸ್‌

stemped

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ ತನಿಖೆ ನಡೆಸುತ್ತಿದೆ.

ತನಿಖೆಯ ಭಾಗವಾಗಿ ಆರ್‌ಸಿಬಿ ಹಾಗೂ ಡಿಎನ್‌ಎ ಮಾಲೀಕರಿಗೆ ನೋಟಿಸ್‌ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಇಮೇಲ್‌ ಮೂಲಕ ನೋಟಿಸ್‌ ನೀಡಲಾಗಿದ್ದು, ಆರ್‌ಸಿಬಿ ಮುಖ್ಯಸ್ಥ ಪ್ರಥಮೇಶ್‌ ಮಿಶ್ರಾ, ಉಪಾಧ್ಯಕ್ಷ ರಾಜೇಸ್‌ ಮೆನನ್‌, ಡಿಎನ್‌ಎ ಸಂಸ್ಥೆ ಎಂಡಿ ವೆಂಕಟ್‌ ವರ್ಧನ್‌, ಡೈರೆಕ್ಟರ್‌ ರೌಲ್‌ ವರ್ಧನ್‌, ರೀಹಲ್‌ ವರ್ಧನ್‌ಗೆ ನೋಟಿಸ್‌ ನೀಡಿದೆ.

Tags:
error: Content is protected !!