Mysore
23
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ದಯವಿಟ್ಟ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ : ಇಬ್ರಾಹಿಂ !

ಬೆಂಗಳೂರು : ದಯಮಾಡಿ ಯಾರು ನಮ್ಮ ಸಮಾಜದ ಹೆಸರನ್ನು ಉಪಯೋಗ ಮಾಡಿಕೊಳ್ಳಲೇ ಬೇಡಿ ಎಂದು ಹಿರಿಯ ರಾಜಕಾರಣಿ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತ ಹಾಗೂ ಹಿಂದುಳಿದವರ್ಗಗಳ ಹೆಸರನ್ನು ಉಪಯೋಗಿಸಿಕೊಳ್ಳಬೇಡಿ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ಹೇಳಿದ್ದಾರೆ.

ಅದರಲ್ಲೂ ದೇಶದ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದವರು ನಮ್ಮಸಮುದಾಯದ ಹೆಸರು ಬಳಿಸಿಕೊಳ್ಳಬೇಡಿ ಎಂದರು.

ಓಲೈಕೆ ಬಗ್ಗೆ ಮಾತನಾಡುತ್ತಾರೆ, ಸಾಚಾರ್‌ ಕಮಿಷನ್‌ ಬಂದು ೭೨ ವರ್ಷವಾಗಿದೆ. ಅವರ ವರದಿ ಪ್ರಕಾರ ದಲಿತರಿಗಿಂತ ಅಲ್ಪಸಂಖ್ಯಾತರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಿದೆ. ಆದರೂ ನಾವು ಯಾವುದೇ ಚಳುವಳಿ ಮಾಡಿಲ್ಲ ಎಂದರು.

ದೇಶದಲ್ಲಿ ಶಾಂತಿ ಸೌಹಾಧತೆ ಇರಬೇಕು ಎಂಬ ಕಾರಣಕ್ಕೆ ದೇಶದಲ್ಲಿ ಎಂತೆಂತಾ ಕಾನೂನುಗಳು ಬಂದರೂ ತಲೆ ಬಾಗಿ ಹೋಗುತ್ತಿದ್ದೇವೆ ಎಂದರು.

ಇದನ್ನು ಅರ್ಥ ಮಾಡಿಕೊಂಡು ಪ್ರಧಾನಿ ಮೋದಿ ಅವರು ಈಗಲಾದರು ಒಂದು ಸ್ಪಷ್ಠನೆ ನೀಡುತ್ತಾರೆ ಎಂಬ ವಿಶ್ವಾಸ ನನ್ನಲಿದೆ ಎಂದು ಅಭಿಪ್ರಾಯಪಟ್ಟರು.

ಮೋದಿಗೆ ಹತಾಷೆ ಇದೆ : ಈ ಬಾರಿ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮೋದಿ ಅವರೆ ಅಧಿಕಾರಕ್ಕೆ ಬರುತ್ತಾರೆ. ಆದರೆ ಅವರು ಊಹಿಸಿದಷ್ಟು ಬಹುಮತ ಬರುವುದಿಲ್ಲ ಎಂಬ ಹತಾಷೆ ಮೋದಿ ಅವರಿಗಿದೆ ಎಂದರು.

Tags:
error: Content is protected !!