ಬೆಂಗಳೂರು: ಮುಡಾದಲ್ಲಿ ಅಕ್ರಮ ನಡೆದಿರುವುದು ಬಿಜೆಪಿ ಅವಧಿಯಲ್ಲಿ ತನಿಖೆ ನಡೆದರೆ ಅವರ ಮೇಲೆ ನಡೆಯಲಿ ಎಂದು ಕೃಷಿ ಸಚಿವ ಚಲಿವರಾಯಸ್ವಾಮಿ ಆಗ್ರಹಿಸಿದ್ದಾರೆ.
ಮುಡಾ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಸಿಕ್ಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಅವರು ಮಾತನಾಡಿದರು.
ಮುಡಾ ಕೇಸ್ನಲ್ಲಿ ಸಿಎಂ ಪಾತ್ರ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸಿಎಂ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಿರುವ ವಿಚಾರದಲ್ಲಿ ಅವರು ಯಾವುದೇ ಪ್ರಭಾವ ಬೀರಿಲ್ಲ. ಎಲ್ಲರಿಗೂ ಕೊಡುವಂತೆ ಸಿಎಂ ಪತ್ನಿ ಅವರಿಗೂ ಬದಲಿ ನಿವೇಶನ ನೀಡಿದ್ದಾರೆ ಎಂದು ಹೇಳಿದರು.
ಈ ಕೇಸ್ನಿಂದ ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ಸಿಕ್ಕಿದೆ. ಈ ಅಕ್ರಮ ನಡೆದಿರುವುದು ಬಿಜೆಪಿ ಅವಧಿಯಲ್ಲಿ. ಈಗ ಇದರ ಹೊಣೆ ಬಿಜೆಪಿ-ಜೆಡಿಎಸ್ನವರು ಹೊರಬೇಕು ಎಂದು ತಿಳಿಸಿದರು.





