Mysore
23
few clouds

Social Media

ಸೋಮವಾರ, 26 ಜನವರಿ 2026
Light
Dark

ಹಾಲಿನ ದರ ಏರಿಕೆ: ಬೆಲೆ ಏರಿಕೆ ಸಮರ್ಥಿಸಿಕೊಂಡ ಎಚ್.ಕೆ.ಪಾಟೀಲ್‌

ಬೆಂಗಳೂರು: ರಾಜ್ಯ ಸರ್ಕಾರ ಹಾಲಿನ ದರವನ್ನು ಗುರುವಾರ ಏರಿಕೆ ಮಾಡಿದ್ದು, ಬೆಲೆ ಏರಿಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಆದರೆ ಈ ಮಧ್ಯೆ ಹಾಲಿನ ದರವಾದ 4 ರೂಪಾಯಿಗಳನ್ನು ರೈತರಿಗೆ ನೀಡುತ್ತೇವೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಮಾರ್ಚ್.‌28) ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಎಂಎಫ್‌ ಪ್ರಸ್ತಾಪದ ಮೇರೆಗೆ ರಾಜ್ಯ ಸರ್ಕಾರದಿಂದ ಹಾಲಿನ ದರವನ್ನು 4 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಈ ಬೆಲೆ ಏರಿಕೆ ಮಾಡಿರುವ ಹಣವನ್ನು ರೈತರಿಗೆ ನೀಡುತ್ತೇವೆ. ಅಲ್ಲದೇ ನೆರೆ-ಹೊರೆಯ ರಾಜ್ಯಗಳಿಗೆ ನಮ್ಮ ಹಾಲಿನ ದರವನ್ನು ಹೋಲಿಕರ ಮಾಡಿ ನೋಡಿದರೆ, ಆ ರಾಜ್ಯಗಳಿಂತ ನಮ್ಮ ರಾಜ್ಯದಲ್ಲಿಯೇ 5 ರೂ. ಕಡಿಮೆ ಇದೆ ಎಂದು ಹೇಳಿದರು.

ಇನ್ನು ಹಾಲಿನ ದರ ಏರಿಕೆಯಂತೆ ವಿದ್ಯುತ್‌ ದರ ಏರಿಕೆಯೂ ಅನಿವಾರ್ಯವಾಗಿದ್ದು, ಬಡವರರಿಗೆ ಉಚಿತ ನೀಡುತ್ತೇವೆ. ಆದರೆ ಶ್ರೀಮಂತರಿಗೆ ವಿದ್ಯುತ್‌ ದರವನ್ನು ಏರಿಕೆ ಮಾಡುತ್ತೇವೆ ಎಂದರು.

Tags:
error: Content is protected !!