Mysore
24
overcast clouds

Social Media

ಶನಿವಾರ, 04 ಏಪ್ರಿಲ 2026
Light
Dark

ನಾನು ಲೋಕಸಭಾ ಟಿಕೆಟ್‌ ಕೇಳಿಲ್ಲ : ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು:  ಈ ಬಾರಿಯ ಲೋಕಸಭಾ ಚುನಾವಣೆಗೆ ನಾನು ಟಿಕೆಟ್‌ ಕೇಳಿದ್ದೇನೆ ಎಂಬ ಊಹಾಪೋಹ ಹರಿದಾಡುತ್ತಿದೆ. ನಾನಂತು ಟಿಕೆಟ್‌ ಕೇಳಿಲ್ಲ. ಪಕ್ಷ ತೀರ್ಮಾನಿಸಿದರೆ ಅದಕ್ಕೆ ಬದ್ಧನಾಗಿದ್ದೇನೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಾನಾಗೆ ಟಿಕೆಟ್‌ ಕೇಳಿಲ್ಲ. ಒಂದು ವೇಳೆ ಪಕ್ಷ ನನ್ನನ್ನು ಅಭ್ಯರ್ಥಿಯನ್ನಾಗಿ ಗೋಷಣೆ ಮಾಡಿದರೆ ಅದಕ್ಕೆ ಬದ್ಧನಾಗಿದ್ದೇನೆ. ಇಲ್ಲವಾದರೆ ಪಕ್ಷ ಯಾರನ್ನು ಅಭ್ಯರ್ಥಿ ಮಾಡುತ್ತದೊ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರುವ ಕೆಲಸ ಮಾಡುವುದು ನಮ್ಮ ಜವಬ್ಧಾರಿ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸಂಘಟನೆ ಮಾಡುವ ಕೆಲಸ ಮಾಡುತ್ತಿದ್ದೇನೆ ಎಂದರು.

ಇಂದಿಗೂ ನನ್ನ ಮಾತಿಗೆ ಬದ್ಧ: ಭಾರತ ಹಿಂದು ರಾಷ್ಟ್ರವಾದರೆ ದೇಶಕ್ಕೆ ಉಳಿಗಾಲವಿಲ್ಲ ಎಂಬ ನನ್ನ ಹೇಳಿಕೆಗೆ ಇಂದಿಗೂಬದ್ಧನಾಗಿದ್ದೇನೆ. ನಾನು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಸರ್ಕಾರ ಧರ್ಮದ ಕೆಲಸ ಮಾಡುವುದಲ್ಲ. ಸರ್ಕಾರ ಮಾಡಬೇಕಾಗಿರುವುದು ಅಭಿವೃದ್ಧಿ ಕೆಲಸ. ಬಿಜೆಪಿ ಅಭಿವೃದ್ಧಿಯನ್ನೇ ಮಾಡದೆ ಕೇವಲ ಧರ್ಮದ ಕೆಲಸ ಮಾಡುತ್ತಿದೆ. ಧರ್ಮದ ವಿಚಾರದಲ್ಲಿ ಕೆಲಸ ಮಾಡುವುದಕ್ಕೆ ಬೇರೆ ವ್ಯವಸ್ಥೆ ಇದೆ.

 

ಟಾರ್ಗೆಟ್‌ ಮಾಡಲು ಪ್ರತಾಪ್‌ ಸಿಂಹ ನ್ಯಾಷನಲ್‌ ಲೀಡರಾ?
ನನ್ನ ತಂದೆ ಯಾವತ್ತೂ ಟಾರ್ಗೆಟ್‌ ರಾಜಕಾರಣ ಮಾಡಿಲ್ಲ. ಅಷ್ಟಾಗಿಯೂ ಟಾರ್ಗೆಟ್‌ ಮಾಡಲು ಪ್ರತಾಪ್‌ ಸಿಂಹ ಏನು ನ್ಯಾಷನಲ್‌ ಲೀಡರಾ? ಪ್ರತಾಪ್‌ ಸಿಂಹ ತಾವು ನ್ಯಾಷನಲ್‌ ಲೀಡರ್‌ ಎಂಬ ಭ್ರಮೆಯಲಿದ್ದಾರೆ. ಪ್ರತಾಸಿಂಹ ಅವರ ತಮ್ಮ ತಪ್ಪು ಮಾಡಿದ್ದಾರೆ ಹೀಗಾಗಿ ಬಂಧಿಸಿದ್ದಾರೆ. ತಮ್ಮನ ತಪ್ಪು ಮುಚ್ಚಿಕೊಳ್ಳಲು ಸಂಸದರು ಹೀಗೆಲ್ಲಾ ಮಾತನಾಡುತ್ತಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!