Mysore
25
overcast clouds
Light
Dark

ಪಟಾಕಿ ಸಿಡಿಸುವ ವೇಳೆ ದುರಂತ : ಕಿಡಿಯಿಂದ ಹೊತ್ತಿ ಉರಿದ ಅಂಗಡಿ

ಚಿಕ್ಕಬಳ್ಳಾಪುರ : ಪಟಾಕಿ ಸಿಡಿಸುವ ವೇಳೆ ಹಾರಿದ ಕಿಡಿಯಿಂದ ಗುಜುರಿ ಅಂಗಡಿ ಬೆಂಕಿಗೆ ಆಹುತಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ವಿಜಯಪುರ ಪಟ್ಟಣದಲ್ಲಿ ನಡೆದಿದೆ.

ವಿಜಯಪುರ ಪಟ್ಟಣದ ಬೈಪಾಸ್ ರೋಡ್ ನಲ್ಲಿರುವ ಮಂಡಿ ಬೆಲೆ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

 ಬೆಂಕಿಯ ಕೆನ್ನಾಲಿಗೆ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.

 ಭರತ್ ನಗರದ ಮುಬಾರಕ್ ಎಂಬುವವರಿಗೆ ಸೇರಿದ್ದ ಗುಜರಿ ಅಂಗಡಿಯ ಮೇಲೆ ಪಟಾಕಿ ಕಿಡಿ ಬಿದ್ದು ಈ ಅವಘಡ ಸಂಭವಿಸಿದೆ. ಇದರಿಂದ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಾಳಾಗಿದೆ ಎಂದು ಅಂಗಡಿಯ ಮಾಲಿಕ ತಿಳಿಸಿದ್ದಾರೆ.

ಇನ್ನು ದೇವನಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ