Mysore
23
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಭವಾನಿ ರೇವಣ್ಣ ಅರ್ಜಿ ವಜಾ; ಬಂಧನದ ಭೀತಿ

ಬೆಂಗಳೂರು: ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದ್ದು, ಇದರಿಂದ ಭಾವನಿ ರೇವಣ್ಣ ಅವರಿಗೆ ಬಂಧನದ ಭೀತಿ ಎದುರಾಗಿದೆ.

ಕೆ.ಆರ್‌ ನಗರ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ  ಎಸಿಎಂಎಂ ಕೋರ್ಟ್‌ಗೆ ಭವಾನಿ ರೇವಣ್ಣ ಜಾಮೀನು ಅರ್ಜಿ ಸಲ್ಲಿಸಿದರು. ಇಂದು(ಮೇ.೩೧) ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ಭವಾನಿ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತಂಡ ಭವಾನಿ ರೇವಣ್ಣ ಅವರಿಗೆ ನೋಟೀಸ್‌ ನೀಡಿತ್ತು. ಆದರೆ, ಈ ನೋಟಿಸ್‌ಗೆ ಭವಾನಿ ರೇವಣ್ಣ ಅವರ ಉತ್ತರ ನೀಡಿಲ್ಲ. ಅಲ್ಲದೇ ಕಳೆದ ಹದಿನೈದು ದಿನದಿಂದ ಭವಾನಿ ರೇವಣ್ಣ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.

Tags:
error: Content is protected !!