Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ವಿರಾಟ್ ಕೊಹ್ಲಿಗೆ ನಿರಾಸೆ: ಆರ್‌ಸಿಬಿ ನೂತನ ನಾಯಕನಾಗಿ ರಜತ್‌ ಪಾಟಿದಾರ್‌ ಆಯ್ಕೆ

ಇಂಡಿಯನ್ ಪ್ರೀಮಿಯರ್ ಲೀಗ್‌ನ 2025ರ ಆವೃತ್ತಿಯು ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು ಮತ್ತು ಪ್ರತಿ ದಿನವೂ ಅಭಿಮಾನಿಗಳಲ್ಲಿ ಉತ್ಸಾಹವು ಹೆಚ್ಚಾಗುತ್ತಿದೆ.

ಸೀಸನ್‌ಗೆ ಮುಂಚಿತವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಣೆ ಮಾಡಿದೆ. ಸ್ಫೋಟಕ ಬ್ಯಾಟರ್ ರಜತ್ ಪಟಿದಾರ್​ಗೆ ಕ್ಯಾಪ್ಟನ್​ ಪಟ್ಟ ನೀಡಿದೆ.

ಈ ಮೂಲಕ ಭವಿಷ್ಯದಲ್ಲಿ ಪಾಟಿದಾರ್‌ ಆರ್‌ಸಿಬಿ ಪರ ಇನ್ನೂ ಕೆಲ ವರ್ಷಗಳ ಕಾಲ ಆಡುವ ಕಾರಣ ಯುವ ನಾಯಕತ್ವದ ಮೊರೆ ಹೋಗಿದೆ.

ಈ ಹಿನ್ನೆಲೆಯಲ್ಲಿ ರಜತ್‌ ಪಾಟಿದಾರ್‌ ಆರ್‌ಸಿಬಿ ತಂಡದ 8ನೇ ನಾಯಕನಾಗಿ ಆಯ್ಕೆಯಾಗಿದ್ದು, ಯುವ ಆಟಗಾರನ ಮೇಲೆ ಕಪ್‌ ಗೆಲ್ಲಿಸುವ ಮಹತ್ವದ ಜವಾಬ್ದಾರಿಯಿದೆ.

 

Tags: