Mysore
20
overcast clouds
Light
Dark

ಸತ್ಯ ಯಾವತ್ತು ಜಯಿಸುವುದು: ಬಾಷಣಕ್ಕೆ ಕತ್ತರಿ ಹಾಕಿದ ಬಗ್ಗೆ ರಾಗಾ ಪ್ರತಿಕ್ರಿಯೆ

ನವದೆಹಲಿ: ಜುಲೈ.1ರ ಸೋಮವಾರದಂದು ವಿರೋಧ ಪಕ್ಷದ ನಾಯಕನಾಗಿ ರಾಹುಲ್‌ ಗಾಂಧಿ ಅವರು ನೇಮಕಗೊಂಡ ಮೊದಲ ದಿನವೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಹರಿಹಾಯ್ದಿದ್ದರು.

ತಮ್ಮ ಭಾಷಣದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ದೇಶದಲ್ಲಿ ದ್ವೇಷ ಹಾಗೂ ಹಿಂಸೆಯನ್ನು ಹರಡುತ್ತಿದೆ ಎಂದು ಕಿಡಿಕಾರಿದ್ದರು. ಹಿಂದೂ ಧರ್ಮದಲ್ಲಿರುವವರು ಹಿಂಸೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಭಾಷಣದ ಮದ್ಯೆ ಪ್ರವೇಶ ಮಾಡಿದ ಮೋದಿ, ಇಡೀ ಹಿಂದೂ ಸಮುದಾಯವನ್ನು ರಾಹುಲ್‌ ಗಾಂಧಿ ಅವಮಾನಿಸಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ್ದ ರಾಗಾ ನರೇಂದ್ರ ಮೋದಿ ಆಗಲಿ, ಆರ್‌ಎಸ್‌ಎಸ್‌ ಆಗಲಿ ಹಿಂದೂ ಧರ್ಮದ ಪ್ರತಿನಿಧಿಯಲ್ಲ ಎಂದು ಟಾಂಗ್‌ ಕೊಟ್ಟಿದ್ದರು.

ಇಂದು (ಜುಲೈ.2) ರಾಹುಲ್‌ ಗಾಂಧಿ ಅವರ ಭಾಷಣದ ಅನೇಕ ಭಾಗಗಳಿಗೆ ಲೋಕಸಭಾ ಕಡತಗಳಿಂದ ತೆಗೆದುಹಾಕಿರುವ ಬಗ್ಗೆ ಪ್ರತಿಕ್ರಿಯೆಯನ್ನು ರಾಹಲ್‌ ಗಾಂಧಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನಾನು ಹೇಳಬೇಕಾಗಿರುವುದನ್ನು ಹೇಳಿದ್ದೇನೆ. ನಾನು ಹೇಳಿರುವುದು ಸತ್ಯ. ಮೋದಿ ಅವರು ಅವರ ಜಗತ್ತಿನಲ್ಲಿ ಸತ್ಯವನ್ನು ಹೊರಹಾಕಬಹುದು ಆದರೆ ವಾಸ್ತವದಲ್ಲಲ್ಲ. ಸತ್ಯ ಯಾವತ್ತೂ ಜಯಿಸುತ್ತದೆ ಎಂದು ರಾಗಾ ಹೇಳಿದ್ದಾರೆ.