Mysore
20
clear sky

Social Media

ಮಂಗಳವಾರ, 17 ಮಾರ್ಚ್ 2026
Light
Dark

ಹೊರ್ಮುಜ್‌ ಜಲಸಂಧಿ ಶತ್ರುಗಳಿಗೆ ಮಾತ್ರ ಮುಚ್ಚಿದೆ : ಇರಾನ್

ಟೆಹ್ರಾನ್ : ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆಯೂ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶತ್ರು ರಾಷ್ಟ್ರ ಮತ್ತು ಅವುಗಳ ಬೆಂಬಲ ದೇಶಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಅಂತರಾಷ್ಟ್ರೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅರಾಘ್ಚಿ ಅವರು, “ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿಲ್ಲ, ತೆರೆದಿದೆ. ನಮ್ಮ ಶತ್ರುಗಳು ಮತ್ತು ಅದರ ಬೆಂಬಲ ಮಿತ್ರ ರಾಷ್ಟ್ರಗಳಿಗೆ ಮಾತ್ರ ಮುಚ್ಚಲ್ಪಟ್ಟಿದೆ. ಇತರ ರಾಷ್ಟ್ರಗಳ ಹಡಗುಗಳು ಸುರಕ್ಷಿತವಾಗಿ ಸಾಗಣೆ ಮಾಡಬಹುದು ಎಂದು ಘೋಷಿಸಿದ್ದಾರೆ.

ಇರಾನ್ ಯುದ್ಧ ವಿರಾಮಕ್ಕೆ ಕೋರಿಲ್ಲ, ಯುದ್ಧ ನಿರ್ಣಾಯಕ ಅಂತ್ಯ ಬಯಸುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಯುದ್ಧದಲ್ಲಿ ಭಾಗವಹಿಸದ ರಾಷ್ಟ್ರಗಳು ಇರಾನ್ ಅನುಮತಿಯೊಂದಿಗೆ ಜಲಸಂಧಿಯನ್ನು ಬಳಸಬಹುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಈ ಹೇಳಿಕೆಯು ಭಾರತಕ್ಕೆ ಸಕಾರಾತ್ಮಕ ಸೂಚನೆಯಾಗಿದ್ದು, ಇರಾನ್-ಅಮೆರಿಕ ಸಂಘರ್ಷ ತೀವ್ರಗೊಂಡ ನಂತರ ಹೊರ್ಮುಜ್ ಮೂಲಕ ಸಾಗಣೆ ತೀವ್ರವಾಗಿ ಕಡಿಮೆಯಾಗಿತ್ತು. ಆದರೆ ಭಾರತದ ಶಿವಾಲಿಕ್ ಟ್ಯಾಂಕರ್ ಇಂದು ಗುಜರಾತ್‌ನ ಮುಂದ್ರಾ ಪೋರ್ಟ್‌ಗೆ ಬಂದು ಸೇರಿದೆ. ನಾಳೆ ನಂದಾದೇವಿ ಕಾಂಡ್ಲಾಗೆ ತಲುಪುವ ನಿರೀಕ್ಷೆಯಿದೆ.

Tags:
error: Content is protected !!