Mysore
19
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರಾಜೀವ್‌ ಗಾಂಧಿ ಹತ್ಯೆ ಪ್ರಕರಣ; ಶೀಘ್ರದಲ್ಲೇ ಅಪರಾಧಿಗಳ ಗಡಿಪಾರು

ಚೆನ್ನೈ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಿಡುಗಡೆಯಾದ ಮೂವರು ಅಪರಾಧಿಗಳಿಗೆ ಶ್ರೀಲಂಕಾದ ಉಪ ಹೈಕಮಿಷನ್‌ ತಾತ್ಕಾಲಿಕ ಪ್ರಯಾಣ ದಾಖಲೆಗಳನ್ನು ನೀಡಿದೆ. ಹೀಗಾಗಿ ಶೀಘ್ರದಲ್ಲಿಯೇ ಅವರನ್ನು ಶ್ರೀಲಂಕಾಗೆ ಗಡಿಪಾರು ಮಾಡಲಾಗುವುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್‌ ಹೈಕೋರ್ಟ್‌ಗೆ ತಿಳಿಸಿದೆ.

ಸದ್ಯ ಈ ಮೂವರು ತಿರುಚ್ಚಿಯ ಹೆಚ್ಚಿನ ಭದ್ರತಾ ವಿದೇಶಿಯರ ಬಂಧನ ಕೇಂದ್ರದಲ್ಲಿದ್ದು, ಮುರುಗನ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಆರ್.‌ ಸುರೇಶ್‌ ಕುಮಾರ್‌ ಮತ್ತು ಕೆ. ಕುಮಾರೇಶ್‌ ಬಾಬು ಅವರಿದ್ದ ವಿಭಾಗೀಯ ಪೀಠದ ಮುಂದೆ ಹೆಚ್ಚುವರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್.‌ ಮುನಿಯಪ್ಪರಾಜ್‌ ಈ ವಿಷಯವನ್ನು ತಿಳಿಸಿದರು.

Tags:
error: Content is protected !!