ನವದೆಹಲಿ: ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಂಸತ್ ಭವನದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಳೆಗಾಲ ಮತ್ತು ಅಧಿವೇಶನ ಎರಡೂ ಪ್ರಯೋಜನಕಾರಿಯಾಗಲಿದೆ. ದೇಶವು ಸುಧಾರಣಾ ಎಕ್ಸ್ಪ್ರೆಸ್ನೊಂದಿಗೆ ಸಾಗುತ್ತಿದೆ. ಅನುಭವಿ ಸಂಸದರ ಜ್ಞಾನ ಅನುಭವ ದೇಶಕ್ಕೆ ಅಗತ್ಯವಿದೆ. ಸದನದಲ್ಲಿ ವಿಚಾರಗಳಿಗೆ ಗೌರವ ನೀಡುತ್ತೀರಿ ಎಂಬ ಭರವಸೆ ಇದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ವಿಶ್ವದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದರು.




