Mysore
23
broken clouds
Light
Dark

ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು!

ನವದೆಹಲಿ: ಬಿಜೆಪಿ ವರಷ್ಠ ಲಾಲ್‌ ಕೃಷ್ಣ ಅಡ್ವಾಣಿ ಅವರು ಆರೋಗ್ಯ ಸಮಸೆಯಿಂದಾಗಿ ಬುಧವಾರ (ಜೂನ್‌.26) ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ದೆಹಲಿಯ ಹೇಮ್ಸ್‌ ಆಸ್ಪತ್ರೆಗೆ ಅವರನ್ನು ದಾಖಲಾಗಿದೆ ಎಂದು ವರದಿಯಾಗಿದೆ. ಮೂತ್ರಶಾಸ್ತ್ರದ ವಿಭಾಗದ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.

ರಾಜಕೀಯ, ದೇಶದ ಆಡಳಿತ, ದೇಶಕ್ಕಾಗಿ ಅವರ ಅಘಮ್ಯ ಸೇವೆಗಾಗಿ ಈ ಬಾರಿಯ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗ ಭಾರತ ರತ್ನವನ್ನು ನೀಡಿ ಅಡ್ವಾಣಿಯವರನ್ನು ಗೌರವಿಸಲಾಗಿದೆ.

Tags: