ಮೈಸೂರು : ಮುಂಬರುವ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಲಿರುವ ಪ್ರವಾಸಿಗರಿಗೆ ಸುರಕ್ಷತೆಯನ್ನು ಒದಗಿಸಬೇಕು ಹಾಗೂ ಹೋಟೆಲ್ನಲ್ಲಿ ಉಳಿದುಕೊಳ್ಳವ ಪ್ರವಾಸಿಗರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟಕೊಳ್ಳಬೇಕುಂದು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ಸೂಚನೆ ನೀಡಿದ್ದಾರೆ.
ಗುರುವಾರ ನಗರದ ಖಾಸಗಿ ಹೋಟೆಲ್ನಲ್ಲಿ ಹೋಟೆಲ್ ಮಾಲೀಕರು ಹಾಗೂ ವ್ಯವಸ್ಥಪಾಕರ ಸಭೆಯಲ್ಲಿ ದಸರಾ ವೇಳೆ ತೆಗೆದುಕೊಳ್ಳಬೇಕಾದ ಜಾಗೃತ ಕ್ರಮಗಳ ಬಗ್ಗೆ ಹೋಟೆಲ್ ಮಾಲೀಕರುಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ದಸಾರ ವೇಳೆ ಮೈಸೂರು ನಗರಕ್ಕೆ ದೇಶ ವಿದೇಶಗಳೀಂದ ಲಕ್ಷಾಂತರ ಮಂದಿ ಪ್ರವಾಸಿಗರು ಆಗಮಿಸಲಿದ್ದಾರೆ ಆದರಲ್ಲಿಯೂ ಜಂಬೂ ಸವಾರಿ ಮುನ್ನ ದಿನ ನಗರದ ಹೋಟೆಲಗಳಲ್ಲಿ ಎಲ್ಲಾ ಕೋಠಡಿಗಳು ಭರ್ತಿಯಾಗುವ ಸಾಧ್ಯತೆಗಳು ಹೆಚ್ಚು ಆದ್ದರಿಂದ ಪ್ರವಾಸಿಗರಿಗೆ ಸುರಕ್ಷತೆ ಒದಗಿಸಿವುದು ನಿಮ್ಮೆಲ್ಲರ ಜವಬ್ದಾರಿ ಎಂದು ಹೇಳಿದರು.
ಹೋಟೆಲ್ ಹಾಗೂ ವಸತಿಗೃಹಗಳ ಆಳವಡಿಸಿರುವ ಸಿಸಿ ಟಿವಿ ಕ್ಯಾಮರಗಳನ್ನು ಸುಸ್ಥಿಯಲ್ಲಿ ಇಟ್ಟಕೊಳ್ಳಬೇಕು, ವಸತಿ ಗೃಹದಲ್ಲಿ ತಗ್ಗುವವರ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಇಟ್ಟಿಕೊಳ್ಳಬೇಕು. ಎಲ್ಲಾ ಆಧಾರ್ ಹಾಗೂ ವಿಳಾಸ ಧೃಢಿಕರಣ ಗುರುತಿನ ಚೀಟಿ ನಕಲು ಪ್ರತಿಗಳನ್ನು ಸಂಗ್ರಹಿಸಿ ಇಟ್ಟಿಕೋಳಬೇಕು ಈ ಸಂಬಂಧ ಯಾವುದೇ ಪ್ರವಾಸಿಗರು ಅನುಮಾನಸ್ಪಂದವಾಗಿ ನಡೆದುಕೊಂಡಲ್ಲಿ ಕೊಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಒಟ್ಟಾರೆ ದಸರಾ ಸಂದರ್ಭದಲ್ಲಿ ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ಅನಾನುಕೂಲತೆಗಳು ಆಗದಂತೆ ನೀಗವಹಿಸಬೇಕು. ಇದರ ಜೊತೆಗೆ ಪೊಲೀಸರು ಯಾವುದೇ ಸಂದರ್ಭದಲ್ಲಿ ಹೋಮ್ಸ್ಟೇ ರೆಸಾರ್ಟ್ ಹಾಗೂ ವಸತಿ ಗೃಹಗಳಿಗೆ ಆಗಮಿಸಿ ಮಾಹಿತಿ ಕೇಳಿದಲ್ಲಿ ನಿವುಗಳು ನೀಡಬೇಕು. ಈ ಸಂಬಂಧ ಸೂಕ್ತ ಹೆಚ್ಚರಿಕೆಯಿಂದ ಹಾಗೂ ಜವಬ್ದಾರಿ ನಿಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್ ತಿಳಿಸಿದರು.
ಸಭೆಯಲ್ಲಿ ಡಿಸಿಪಿಗಳಾದ ಬಿಂದುಮಣಿ, ಕೆ.ಎಸ್,ಸುದರ್ರಾಜು, ಹಾಗೂ ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.





